|| ಹನುಮ ಸ್ತುತಿ ||
ರಚನೆ : ವ್ಯಾಸರಾಜರು
ರಾಗ- ಶುಭಪಂತುವರಾಳಿ
ತಾಳ- ಆದಿ
ಜಯ ವಾಯು ಹನುಮಂತ
ಜಯ ಭೀಮ ಬಲವಂತ ||ಪ ||
ಜಯ ಪೂರ್ಣ ಮತಿವಂತ
ಜಯ ಸಲಹೊ ಸಂತ ||ಅ.ಪ||
ಅಂಜನೆಯಲ್ಲಿ ಜನಿಸಿ ಅಂದು ರಾಮನ ಸೇವೆ
ನಂದದಲಿ ಮಾಡಿ ಕಪಿ ಬಲವ ಕೂಡಿ
ಸಿಂಧು ಲಂಫಿಸಿ ವನ ಭಂಗಿಸಿ ಸೀತೆ
ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ ||೧||
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವ ಕುಟ್ಟಿ
ಉರಗ ಬಂಧನದಿಂದ ಕಪಿವರರರು ಮೈಮರೆಯೆ
ಗಿರಿಯ ಸಂಜೀವನವ ತಂದು ಬದುಕಿಸಿದೆ ||೨||
ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀಪಾರ್ಥ ಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂಜಗದಿ ಮೆರೆದೆ ||೩||
ಧುರದಲಿ ದುರ್ಯೋಧನನ ಬಲವನು ತಂದೆ
ಆರಿತು ದುಶ್ಕಾಸನನ ಒಡಲನ್ನು ಬಗೆದೆ
ಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆ
ಹರಿಯ ಕಿಂಕರ ಧುರಂಧರಗಾರು ಸರಿಯೆ ||೪||
ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀಹರಿಯ ಗುಣಗಳನು ಮರೆಸಿ
ಕಲಿಯನನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀಕೃಷ್ಣ ಪರನೆಂದೆ ||೫||
0 ಕಾಮೆಂಟ್ಗಳು