ಕರೆದರೆ ಧ್ವನಿ ಕೇಳದೆ ರಘು ರಾಮಚಂದ್ರ - Karedare Dhwani Kelade Raghu Ramachandra

|| ಶ್ರೀರಾಮ ಸ್ತುತಿ ||




ಕರೆದರೆ ಧ್ವನಿ ಕೇಳದೆ ರಘು ರಾಮಚಂದ್ರ 

ಮರುಕವಾಗದೆ ನಿನಗೆ ||ಪ||

ಮರುತನಂದದಿ ನಿನ್ನ ಪೂಜಿಸಲರಿಯನು 

ಭರತನಂದದಿ ನಿನ್ನ ಸೇವಿಸಲರಿಯನು||ಅ.ಪ||


ದುರುಳ ರಕ್ಕಸನು ತನ್ನ ಶಿಶುವನ್ನು ಪಿಡಿದು 

ತೋರೋ ಶ್ರೀಹರಿ ಎನಲು 

ತರಳ ಪ್ರಹ್ಲಾದನ ಕರುಣ ವಾಕ್ಯವ ಕೇಳಿ 

ತ್ವರಿತದಿ ಕಂಭದಿಂ ತೋರಲಿಲ್ಲವೇ ದೇವ||೧||


ನೆಗಳಿ ಬಾಯಿಗೆ ಸಿಲುಕಿದ ಕರಿರಾಜನು 

ಪೊರೆಯೋ ಶ್ರೀಹರಿ ಎನಲು 

ಕಾರಿಯಮೊರೆಯ ಕೇಳಿ ತ್ವರಿತದಿಂದಲಿ ಬಂದು 

ಕಾರಿಯನುದ್ದರಿಸಿದ ಕರಿರಾಜ ವರದನೆ||೨||


ವಾಮನ ಮೂರುತಿಯೇ ಬಲಿರಾಜನ 

ಯಾಗ ಮಂಟಪಕೆ ಪೋಗಿ 

ಮೂರು ಪಾದದಷ್ಟು ಭೂಮಿ ದಾನವ ಬೇಡಿ 

ಬಲಿಯ ನೆಲಕೆ ತುಳಿದ ರಘುರಾಮ ವಿಠ್ಠಲ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು