ದಶಾವತಾರ ಹಾಡು - Dashavatharada Hadu

||ದಶಾವತಾರ ಹಾಡು ||




ನಾರಾಯಣ ನಾರಾಯಣ ನಾರಾಯಣ ನಾರಾಯಣ  

ನಾರಾಯಣ ನಾರೇ ಪೇಳೆ ಸಖಿ। 

ಕ್ಷೀರ ಸಾಗರದಲ್ಲಿ ಶಯನವ ಮಾಡಿದ 

ಆದಿನಾರಾಯಣನ ನೋಡೇ ಸಖಿ ॥॥ 


ಕಾಲಿಲ್ಲದಲ್ಲೇ ಓಡಿ । ಎವೆಯಿಕ್ಕದಲೆ ನೋಡಿ । 

ಮಿಂಚಿನಂದ್ದೊಳೆಯುವ ನ್ಯಾರೆ ಸಖಿ । 

ವೇದವ ತಂದು ಸುರರಿಗೆ ಕೊಟ್ಟಂಥ । 

ಮತ್ಸ್ಯಾವತಾರವ ನೋಡೇ ಸಖಿ ॥೧॥ 



ತಲೆಯ ತಗ್ಗಿಸುವನು । ಕಡಲೊಳು ಆಡುವ | 

ಕಡೆದರೆ ಕಡಗೋಲನ್ಯಾರೆ ಸಖಿ ಆಹಾ । 

ಸುರರು ದೈತ್ಯರು ಕೂಡಿ ಒಂದಾಗಿ ಮಧಿಸಲು ।

ಕೂರ್ಮಾವತಾರನೇ ಇಂದು ಮುಖಿ ॥೨॥ 


ಮಾರಿ ತಗ್ಗಿಸುವನು । ಮಣ್ಣು ಚಿಮ್ಮಿ ಓಡುವ । 

ಉನ್ನಂತ ದೋರೆದಾಡೇನ್ಕಾರೆ ಸಖಿ ॥ 

ದುರುಳನ್ನ ಕೊಂದು ಧರಣಿಯತಂದಂಥ । 

ವರಹಾವತಾರನೇ ವಾರೀಜಾಕ್ಷಿ ॥೩||


ಕಂಭದಿಂದಲಿ ಬಂದು । ಕರುಳನ್ನೆ ಬಗೆದು । 

ಕೊರಳೋಳು ಹಾಕಿದನ್ಶಾರೆ ಸಖಿ । 

ನರಮ್ಯಗ ರೂಪದಿ ಉದರವ ಸೀಳಿದ । 

ನರಸಿಂಹನ ರೂಪ ನೋಡೇ ಸಖಿ ॥೪॥ 


ಪುಟ್ಟಪಾದದಿಂದ ಸೃಷ್ಠಿಯನಳೆದ । 

ಪುಟ್ಟ ಬ್ರಹ್ಮಚಾರಿಯಾರೆ ಸಖಿ । 

ಕೊಟ್ಟದ್ದು ಸಾಲದೇ ಮೆಟ್ಟದ ಶಿರವನು । 

ಪುಟ್ಟ ವಾಮನ ರೂಪ ನೋಡೇ ಸಖಿ ॥೫||


ಕೋಪದಿಂದಲಿ ಬಂದು । ಕೊಡಲಿಯನ್ನೇ ಹಿಡಿದು । 

ಕುಲವನ್ನೇ ಸವರಿದ ಯಾರೇ ಸಖಿ । 

ರಕ್ತದೊಳೆ ಸ್ನಾನ ತರ್ಪಣ ಮಾಡಿದ 

ವಿಪ್ರ ಭಾರ್ಗವ ರಾಮ ನೋಡೇ ಸಖಿ ॥೬।|


ಶೀಘ್ರದಿಂದಲಿ ಬಂದು । ಶಬರಿ ಎಂಜಲನುಂಡು । 

ಸೇತುವೆ ಬಂಧನ ಯಾರೇ ಸಖಿ । 

ಕೌಸಲ್ಯನುದರದಿ ಶಿಶುವಾಗಿ ಜನಿಸಿದ । 

ದಶರಥ ರಾಮನ್ನ ನೋಡೇ ಸಖಿ ||೭||


ಬ್ರಹ್ಮಾಂಡದೊಳಗೆಲ್ಲಾ । ಬಂಡಿಯ ಹೊಡೆದನು | 

ಪಾರ್ಥಸಾರಥಿ ಯಾರೇ ಸಖಿ । 

ಮಧುರೆಯಲಿ ಪುಟ್ಟಿ ಗೋಕುಲದಲ್ಲಿ ಬೆಳೆದು | 

ಗೋಪಾಲ ಕೃಷ್ಣನ್ನ ನೋಡೇ ಸಖಿ ||೮||


ಮರೆಯೊಳಗೆ ನಿಂತು । ಮಾನವ ಕಾಯ್ದಂಥ । 

ಮಾಧವ ನಿವನ್ಯಾರೆ ಪೇಳಿ ಸಖಿ | 

ತ್ರಿಮರರ ಸತಿಯರ ವ್ರತ ಪೂರ್ಣ ಮಾಡಿದ ।

ಬೌದ್ಧಾವತಾರನೇ ಚಂದ್ರಮುಖಿ ||೯॥ 


ಹಯವನೇರಿ ಬಂದು। ಧರಣಿಯೆಲ್ಲಾ ತಿರುಗಿ । 

ಗಿರಿಯಲ್ಲಿ ನಿಂತವನ್ಯಾರೆ ಸಖಿ । 

ವೇದಾಂತ ವೇದ್ಯನ ಶ್ರೀ ಪುರಂದರ ವಿಠ್ಠಲನ್ನ 

ಲಕ್ಷ್ಮೀರಮಣನ್ನ ನೋಡೇ ಸಖಿ ||೧೦||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು