|| ಗುರು ಮಹಿಮಾ ಸ್ತುತಿ ||
ಶಂಕರಾನಂದ ಪದ್ಧತಿ
ಗುರುಪಾದದೊಳು ಮನವಿಂಗಿ
ಗುರುಪಾದದೊಳು ಮನವಿಂಗಿ | ಬಂಧ
ತೊರದು ಪೋಯಿತು ನೋಡೆ ತಂಗಿ |
ಹೊರಗೆಂಬವಳಗೆಂಬ | ಹೊರವಳಸಂದೆಂಬ |
ಬಿರುಕಿನೊಳೆನ್ನ ತುಂಬಿರುವಂತೆ ಮಾಡಿದ|ಗುರು||ಪ||
ತಾಪಕೋಪಂಗಳ ಕೆಡಿಸಿ | ಬಳಿಕ |
ರೂಪು ನಾಮಂಗಳ ಸುಡಿಸಿ |
ದೂಪದೀಪಗಳೆಂಬಾ | ರೋಪವೆಲ್ಲವನು ನಿ|
ರ್ಲೇಪವೆನಿಸಿ ನೀ ಚಿ|ದ್ರೂಪನೆಂದರುಪಿದ||ಗುರು||1||
ತನ್ನಾನಂದದ ಸಾರ ಬೆಸಗಿ | ಮನ |
ವಿನ್ನೆಲ್ಲು ಪೋಗದಂತೆಸಗಿ |
ಭಿನ್ನವೆಂಬುವ ನುಡಿ ಶೂನ್ಯವಾಯಿತು ಯೆಂಬ |
ಯೆನ್ನಲ್ಲಿಯೆ ಜಗವೆನ್ನಲ್ಲಿ ತೋರಿದ||ಗುರು||2||
ಗುರುವೆಂಬ ನಾಮವ ಧರಿಸಿ | ಹೊಟ್ಟೆ |
ಹೊರೆಯುವ ಜನ್ಮವ ಹರಿಸಿ |
ಹರುಷವನೇರಿಸಿ ಹರನೊಳು ಸೇರಿಸಿ |
ಮರಣ ಜನ್ಮಂಗಳ ಗೋ|ಚರಿಸದಂತೆಸಗಿದ||ಗುರು||3||
ಮೂರು ಮೂರ್ತಿಗಳಲ್ಲು ಕೂಡಿ | ನಾ |
ಸೇರಿಕೊಂಡಿರುವಂತೆ ಮಾಡಿ |
ತೋರುವ ಬಗೆಯನು ತೋರಿಸಿ ನಮ್ಮಲ್ಲೇ |
ತೋರಿಸಿ ಬೇರೇನು ತೋರದಂತೆಸಗಿದ ||4||
ಮರಣ ಜನ್ಮಂಗಳ ಸುಟ್ಟು | ನಿಜ |
ಗುರು ದೂಷಕರಿಗಿದ ಕೊಟ್ಟು |
ಮರವೆಯ ಬ್ಯಾರಿಟ್ಟು ಅರುಹಿಗೆ ಬ್ಯಾರಿಟ್ಟು |
ಗುರು ಶಂಕರನ ಗುಟ್ಟು|ಅರಿಯದವನ ಬಿಟ್ಟು||ಗುರು||5||
0 ಕಾಮೆಂಟ್ಗಳು