|| ನಾರಾಯಣ ಸ್ತುತಿ ||
ನಾರಾಯಣಾಯ ನಮೋ
ನಾರಾಯಣಾಯ ನಮೋ
ನಾರಾಯಣಾಯ ನಮೋ ||ಪ||
ಹರಿಕೃಷ್ಣ ಶರಣೆನಲು ಅದು ನಿಮಗೆ ಲೇಸು
ಹರಿಯ ಕೀರ್ತನೆಗಳನು ಜಗದೊಳಗೆ ಸೂಸು
ಹರಿ ಭಕ್ತಿಯಿಲ್ಲದವರ ಸಂಗಕ್ಕೆ ಹೇಸು
ಹರಿಯ ಮರೆತರೆ ಮುಂದೆ ನರಕವೆ ಹಾಸು||೧||
ದುರ್ಜನರ ಮನೆಯಲಿಹ ಹಾಲ ಸವಿಗಿಂತ
ಸಜ್ಜನರ ಮನೆಯಲ್ಲಿ ನೀರೆ ಲೇಸೆಂದ
ದುರ್ಜನರ ಒಡನಾಟ ಸಂಗಕಿಂತ
ನಿರ್ಜೀವಿಯಾಗಿರುವ ಕಾಡೆ ಲೇಸೆಂದ||೨||
ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ
ಇಂದ್ರಾದಿಗಳ ಬವಣೆಯನು ನೋಡಿಕೊಂಡ್ಯ
ಎಂದೆಂದಿಗಿಲ್ಲಿ ದೇಹವ ಕಳೆವೆ ಕಂಡ್ಯ
ಹಿಂದು ಮುಂದಿನ ಗತಿಯ ತಿಳಿಯದವ ಭಂಡ||೩||
ಎಳೆತುಳಸಿ ವನಮಾಲೆ ಧರಿಸಿಕೊಳಬೇಕು
ತಿಲಕೋರ್ಧ್ವ ಪುಂಡ್ರಗಳನು ಹಚ್ಚಬೇಕು
ನಳಿನನಾಭನ ಸ್ಮರಣೆಯೊಳು ಮುಳುಗಬೇಕು
ಇಳೆಯೊಳಗೆ ವೈಕುಂಠವನು ಸಾರಬೇಕು||೪||
ಸಿರಿವರನ ಭಕ್ತರನು ಸೇವಿಸಲುಬೇಕು
ಪಿರಿದಾಗಿ ದಾನಧರ್ಮವಾಚರಿಸಬೇಕು
ಧರಣಿ ಪುಣ್ಯಸ್ಥಳವ ಮೆಟ್ಟುತಿರಬೇಕು
ಪುರಂದರವಿಠಲನ್ನ ಸತತ ನೆನೆಬೇಕು||೫||
0 ಕಾಮೆಂಟ್ಗಳು