ಬಲು ಸಡಗರದಿ ಬಂದು ಬೃಂದಾವನವ ಸುತ್ತಿ - Balu sadagaradi Bandu Brindavanava Sutti

||ಶ್ರೀ ವೆಂಕಟಾಚಲ ಅವಧೂತ ಸ್ತುತಿ||



ಬಲು ಸಡಗರದಿ ಬಂದು ಬೃಂದಾವನವ ಸುತ್ತಿ

ಆನಂದದಿ ನಿಂತೆನೋ

ಎಂದೂ ಕಾಣದ ಅನುಭೂತಿ ಪಡೆದು

ಮೈ ಮರೆತು ಭಜಿಸಿಹೆನೋ|


ಹರನೆಲ್ಲಿ ಹರನೆಲ್ಲಿ ಎನುತ ಮುದದಿ ಪಾಡುತ

ಸಖರಾಯಧೀಶನ ಕಂಡೆನೋ

ಮಹದೇವ ತಾನಾಗಿ ಬಕುತರಾ ಪೊರೆಯುತ

ಇದ್ದರೂ ಇಲ್ಲದಂತಿಹನೋ|


ಶಿವನೇ ತಾನಾಗಿ ಲೀಲೆಗಳ ತೋರುತ

ಎಲ್ಲರೊಳಗೊಂದಾಗಿ ಬೆರೆತಿಹನೋ

ಪಂಚ ಭೂತಗಳೊಡೆಯ ತಾನಾದರೂ

ಕಿಂಚಿತ್ತೂ ಗರ್ವ ತೋರನಿವನೋ|


ಎಲ್ಲಾ ಅವನ ಲೀಲೆ ಎನುತ ಎಲ್ಲಾ ಕಷ್ಟ

ದೂರಮಾಡುತ ಮೌನದರಿಸಿಹನೋ 

ಎಲ್ಲಾ ಜೀವಿಗಳ ಒಡನಾಟದಿ ಅರಿವಿಲ್ಲದೇ

ಎಲ್ಲರಲೂ ಅರಿವು ಮೂಡಿಸಿಹನೋ|


ಕರ್ಮ ಬಂಧನದ ಸಂಕೋಲೆ ಕಳಚುತ

ನಿತ್ಯ ಸತ್ಯ ಸಾರಿ ಹೇಳಿಹನೋ

ಸಖರಾಯಾಧೀಶ ಎಂದೊಡೆ ಅನಾಥ ಭಾವ

ಸರಿಸಿ ನಿಮ್ಮೊಡನೆ ಇರುವೆನೆಂದನೋ|


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು