ಕದಂಬ ಗಿರಿಯ ಕದಳೀ ವನದೊಳು - Kadamba Giriya Kadali Vanadolu

||ಶ್ರೀ ಕ್ಷೇತ್ರ ಬೆಲಗೂರಿನ ಹನುಮ ಸ್ತುತಿ||

ರಚನೆ : ಶ್ರೀ ಶ್ರೀ ಶ್ರೀ ಪರಮ ಪೂಜ್ಯ ಬಿಂದು ಮಾಧವ ಶರ್ಮ ಸ್ವಾಮೀಜಿ 




ಕದಂಬ ಗಿರಿಯ ಕದಳೀ ವನದೊಳು 

ಹನುಮನು ಕುಳಿತಿದ್ದ, 

ನಮ್ಮ ಹನುಮನು ಕುಳಿತಿದ್ದ ||ಪ||


ಕಣ ಕಣದಲ್ಲೂ ರಾಮ ನಾಮವ 

ಸೂಸುತ ಮೆರೆದಿದ್ದ, 

ಹನುಮ ಸೂಸುತ ಮೆರೆದಿದ್ದ ||ಅ.ಪ.||


ತಾರಕ ನಾಮವ ನೆನೆಯುತ ತಾನು ತನ್ಮಯನಾಗಿದ್ದ

ತನ್ನನೇ ಮರೆತು ರಾಮನು ತಾನೇ ಆಗೇ ಹೋಗಿದ್ದ||೧||



ಸಾಸಿರ ದಳದಲಿ ನುಡಿಯುವ ನಾದವ ಆಲಿಸಿ ಕೇಳಿದ್ದ 

ನಾದವ ಕೇಳಿ ಮೋದವ ಹೊಂದಿ ನಾದವೇ ಆಗಿದ್ದ 

ಹನುಮ ನಾದವೇ ಆಗಿದ್ದ ||೨||


ಅಲ್ಲಲರಸುತ ಗುಡಿಗಳ ತಿರುಗುತ ಗ್ರಾಮವ ಸೇರಿದ್ದ 

ಬೆಲಗೂರ್‌ ಗ್ರಾಮವ ಸೇರಿದ್ದ 

ವಿಶ್ವವಂದ್ಯನು ವೀರಪ್ರತಾಪ ತಾನೇ ಆಗಿದ್ದ 

ಹನುಮ ತಾನೇ ಆಗಿದ್ದ ||೩||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು