|| ನಾರಾಯಣ ಸ್ತುತಿ ||
ನಾರಾಯಣ ನಿನ್ನ ನಾಮವೊಂದಿರುತಿರೆ |
ಬೇರೊಂದು ನಾಮ ವಿನ್ಯಾಕಯ್ಯ ||ಪ||
ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆ |
ಬೆಟ್ಟವ ಬಳಿಸಲಿನ್ಯಾಕಯ್ಯ ।
ಅಷ್ಟೆ ಶ್ವರ್ಯವು ಮೃಷ್ಟಾನ್ನವಿರುತಿರೆ ಬೀದಿ |
ಬಿಟ್ಟಿ ಕೂಳನು ತಿನ್ನಲ್ಯಾಕಯ್ಯ ||೧||
ಪುರುಷ ಸೇವಾಸಂಗಗಳಿರುತಿರೆ ಬೇರೆ |
ಜನರಿಗೆಲ್ಲ ತೊಳೆಯಲಿನ್ಯಾಕಯ್ಯ ।
ಹರಿವಾಣದೊಳಗಮೃತಾನ್ನವು ಇರುತಿರೆ |
ತಿರುಪೆ ಕೂಳನು ತಿನ್ನಲ್ಯಾಕಯ್ಯ ||೨||
ಬೆಲ್ಲವು ಕರದೊಳಗಿರುತಿರೆ ಕಾಡು |
ಕಲ್ಲನ್ನು ಕಡಿಯಲೀಗ್ಯಾಕಯ್ಯ ॥
ಬಲ್ಲವ ನೆಲೆಯಾದಿ ಕೇಶವನಿರುತಿರೆ |
ಚಿಲ್ಲರೆ ದೈವದ ಹಂಬಲ್ಯಾಕಯ್ಯ ||೩||

0 ಕಾಮೆಂಟ್ಗಳು