|| ಶ್ರೀ ಕೃಷ್ಣ ಸ್ತುತಿ ||
ವಾಸುದೇವಗೆ ಲಕ್ಷುಮಿ ಮಾಲೆ ಇಕ್ಕಿದಳೆ |
ವಾಸವ ವಂದ್ಯನೇ ವಾಸುಕಿ ಶಯನಗೆ
ವಾಸಂತಿ ಮಾಲೆಯ ಕೊರಳೊಳಗಿಟ್ಟಳೆ||ಪ ||
ಆದಿ ಅಂತ್ಯ ರಹಿತನನ್ನು ಮೋದದಿಂದ ಮನದಿ ಭಜಿಸಿ
ಮಾಧವ ಮುಕುಂದನೀಗೆ ಉಕ್ಕಿ ಮಾಲೆಯ ಇಕ್ಕಿದಳಾಗ ||೧||
ನಂದಗೋಪಿ ಕಂದನೆಂದು ಮಂದರ ಗಿರಿಯನೆತ್ತಿದನೆಂದು
ಇಂದಿರೆಯ ಕಂದನೆಂದು ಉಕ್ಕಿಮಾಲೆಯ ಇಕ್ಕಿದಳಾಗ ||೨||
ಅಂಬರೀಶ ಗೊಲಿದನೆಂದು ನಂಬಿದವರ ಕಾಯ್ವ ನೆಂದು
ಮಂಗ ಲಾಂಗ ನೀತಿನೆಂದು ಮಂದಗಮನೆ ಇಕ್ಕಿದಳಾಗ ||೩||
ನಾರದಾದಿ ವಂದ್ಯನೆಂದು ನರಕಸುರನ ಕೊಂದನೆಂದು
ಮುರಗ ಜಾಜಿ ಮಲ್ಲಿಗೆ ತಂದು ಉರಗವೇಣಿ ಇಕ್ಕಿದಳಾಗ||೫||
ಶಂಕ ಚಕ್ರಧಾರ ನಿಂದು ಬ್ರಹ್ಮಾಂಡಕೋಟಿ ವಂದಿತ ನೆಂದು
ಇಂದ್ರ ಚಂದ್ರವಂದ್ಯನೆಂದು ಮಂದಾರ ಮಲ್ಲಿಗೆ ಇಕ್ಕಿದಳಾಗ||೬||
ತೃಪ್ತ ಕಾಂತ ಸನ್ನಿಭನೆಂದು ಭಕ್ತ ಜನಕ ಪ್ರೀತನೆಂದು
ಭಕ್ತಿ ಮುಕ್ತಿ ದಾಯಕನೆಂದು ಉಕ್ಕಿಮಾಲೆಯ ಇಕ್ಕಿದಳಾಗ||೭||
ಅಷ್ಟವರ್ಣ ನಿತನೆಂದು ತುಷ್ಠ ರಾಮದಾಯಕನೆಂದು
ಕೃಷ್ಣ ವಾಸುದೇವನೆಂದು ಉಕ್ಕಿಮಾಲೆಯ ಇಕ್ಕಿದಳಾಗ||೮||
0 ಕಾಮೆಂಟ್ಗಳು