|| ರಾಘವೇಂದ್ರ ಸ್ತುತಿ ||
ಮನ ಮಂದಿರದೊಳು ನೆಲೆಸೋ ಬಂದು|
ರಾಘವೇಂದ್ರ ಗುರು ದಯ ಮಾಡಿಂದೂ....||ಪಲ್ಲವಿ||
ನಗೆ ನೋವಿನ ಆ...ಗರ ವೀ....ಮನವು |
ಭವ ಬಂಧನದೀ..... ಕಾ..... ಣದ ತಿಳಿವು ||
ಗುರುಪದ ಸೇವೆಯು ನೀಡಲಿ ಅರಿವು |
ನಿನ್ನಯ ಕೃಪೆ ಎನಗೆ ಇಹ ಪರವು ||೧||
ವರ ಮಂತ್ರಾಲಯ ಪಾ.....ವನ ನಿಲಯ |
ಕರುಣಾ ಹೃದಯವೇ ನೀ.....ಡುವ ಅಭಯ ||
ಮನದಲ್ಲಿ ಮುಸುಕಿದ ಈ ಕತ್ತಲೆಯ |
ನೀಗಿಸಿ ಬೆಳಕನು ನೀ... ನೀಡು ಜೀಯಾ ||೨||
ಬೃಂದಾವನವೇ ತವ ಸ್ಥಿರ ವಾಸವು |
ವೇಣು ವಿಹಾರಿಯ ಧ್ಯಾನದಿ ನಿರತವು ||
ದೀನರ ಪಾಲಿಪ ಧೀಮಂತ ಗುಣವು |
ಗುರು ಸುಯತೀಂದ್ರರ ಕೃಪೆ ಸಾಧನವು ||೩||

0 ಕಾಮೆಂಟ್ಗಳು