ತತ್ವ ವಿಚಾರ ಪ್ರಕರಣ - ಸಾರುತೀದೇ ಶೃತಿ ಸಾರುತೀದೆಲ್ಲ, Saruthide Shruthi Sarutheedella

|| ತತ್ವ ವಿಚಾರ ಪ್ರಕರಣ ||

kannadabhajanlyrics.blogspot.com
kannadabhajanlyrics.blogspot.com



ಸಾರುತೀದೇ ಶೃತಿ। ಸಾರುತೀದೆಲ್ಲ ॥ಪಲ್ಲವಿ॥ 


ಪರಮಾರ್ಥ ಜ್ಞಾನವಿಲ್ಲದೆ

ನೂರು ಸಾವಿರ ದೇಹದೊಳಗತಿ।

ಘೋರ ತಪದಿಂ ತಪ್ತನಾದರು

ತೋರದಾತ್ಮಾನಂದವೆಂದೂ ||ಅ.ಪ॥ 


ತನ್ನ ನಿಜವನು ತಿಳಿಯಲಾರದೆ

ಭಿನ್ನ ಭಾವನೆಯಿಂದ

ಕಲ್ಮರ ಮಣ್ಣು ಬೊಂಬೆಗಳನ್ನು ಪೂಜಿಸೆ

ಜನ್ಮ ಭಾದೆಯು ತೊಲಗದೆಂದೂ || ೧ ||


ಓದಿ ವೇದವ ಜೀವಪರಮರ

ಭೇದವಳಿಯದ ಮನುಜ।

ಧರೆಯೊಳು ವೇದ ಭಾರವ ಪೊತ್ತು

ತಿರುಗುವ ಮಾದಿಗರ ಮನೆ ಕತ್ತೆಯೆಂದೂ ||೨||


ಜಾತಿ ನೀತಿಗಳಿಲ್ಲದಾತ್ಮಗೆ

ಜಾತಿಯನು ಕಲ್ಪಿಸುತ

ಕರ್ಮದ ಮಾತನಾಡುವ ನರನೆ

ಕಾಲನ ದೂತ ಪಾಶಕೆ ಬದ್ದನೆಂದೂ ||೩||


ಸಕ ಕಂದ ಮೂಲವ ತಿಂದು ನದಿಯೊಳು

ಮಿಂದು ಬೂದಿಯ।  

ಧರಿಸಿ ಪಿಟಿಪಿಟಿ ಎಂದು

ಮಂತ್ರವ ಜಪಿಸಿದರು ಭವ

ಬಂಧವೆಂದಿಗು ತೊಲಗದೆಂದೂ ||೪||


ತತ್ವಮಸಿ ವಾಕ್ಕಾರ್ಥದೊಳಗಿನ

ತತ್ವ ವರಿಯದೆ ಶಂಭು।

ಪೂಜೆಯ ಹತ್ತು ಸಾವಿರ ವರುಷ

ಗೈದರು ಮೃತ್ಯುವೆಂದಿಗು ತಪ್ಪದೆಂದೂ ||೫||


ತನುವೆ ತಾನೆಂದರಿತು ತನ್ನೊಳು

ತನುವಿಗುಸುರಿದ ಜಾತಿ।

ಕರ್ಮವ ನೆಣಿಸಿ ಕರ್ಮಾಗ್ನಿಯಲಿ ಬೇಯುವ

ಮನುಜನಿಗೆ ಭವ ತೊಲಗದೆಂದೂ ||೬||


ನಾನು ನೀನದಿದೆಂಬ ಭಾವಗಳೇನು ತೋರದೆ ಸಚ್ಚಿ

ದಾನಂದಾನುಭವ ಸುಜ್ಞಾನ ತಳದಿಹ

ಮಾನವನೆ ಪರಮಾತ್ಮನೆಂದೂ ||೭||


ಸತ್ಯ ವಸ್ತುವ ಮರೆತು ಮಿಥ್ಯೆಯ ಸತ್ಯವೆಂದುಸುರುತ್ತ|

ಕರ್ಮಕೆ ಭೃತ್ಯರಾಗಿಹ ಮೂಢ ಮನುಜರು

ಸತ್ತು ಜನಿಸುತ್ತಿರುವರೆಂದೂ ||೮||


ನಾರಿ ಒಲಿದೊಡೆ ಪತಿಯ

ಮನಕನು ಸಾರಮಾಗಿರುತಿಹಳು |

ಮುನಿದೊಡೆ ಮಾರಿಸುವಳವ ನೊಡಲದನದರಿಂ

ನಾರಿಯೇ ಹಿರಿ ಮಾರಿಯೆಂದೂ || ೯ ||


ಸಾಯುವರು ದುಃಖಾಗ್ನಿಯಲಿ

ಕಡು ಬೇಯುವರ ನೋಡುತ್ತ

ಎನಗೀ ಕಾಯ ಸುಸ್ಥಿರವೆಂದು ನಂಬಿದ

ನಾಯಿಗುಂಟೇ ಸೌಖ್ಯವೆಂದೂ ||೧೦||


ಬಾಧೆಗೊಳಿಸುತ ತನುವ ಸಮ್ಯಗ್ಬೋಧೆಯಿಲ್ಲದೆ ಬಹು।

ವ್ರತಂಗಳ ಸಾಧಿಸಿದರದರಿಂದಲೀ ಭವ

ಭಾದೆಯೆಂದಿಗು ತೊಲಗದೆಂದೂ || ೧೧ ||


ಎಷ್ಟು ದಿನ ಧರೆಯೊಳಗೆ ಬಾಳ್ದರೂ ನಷ್ಟವಾಗದೇ।

ನಿಲ್ಲದೀ ತನು ಭ್ರಷ್ಟರಿದನರಿತರಿತು ತತ್ತ

ಬಿಟ್ಟು ಬರಿದೇ ಕೆಟ್ಟರೆಂದೂ || ೧೨ ||


ಸ್ವರ್ಗ ಭೋಗವ ಬಯಸಿ ನಿರ್ಮಲ

ನಿರ್ಗುಣಾದ್ವಯ ವಸ್ತುವನು 

ಹರಿ ಭರ್ಗನಾಮದಿ ಪೂಜಿಸುವಗ

ಪವರ್ಗವೆಂದಿಗು ದೊರೆಯದೆಂದೂ ||೧೩||


ಪರಮ ಸದ್ಗುರು ಶಂಕರಾರ್ಯನ

ಚರಣ ಕಮಲವ ಹಿಡಿದು |

ತತ್ತ್ವವನರಿತು ಬ್ರಹ್ಮಾನಂದದೊಳಗಿಹ

ನರನೇ ಸಾಕ್ಷಾಧೀಶನೆಂದೂ ||೧೪||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು