|| ಶ್ರೀನಿವಾಸ ಸ್ತುತಿ ||
ನಿನ್ನ ಭಕುತಿಯನು ಬೀರೊ ಎನ್ನ
ಮನ್ನಿಸಿ ಸಲಹುವರಾರೋ..... ||ಪ||
ಸನ್ನುತ ಸನ್ಮಾರ್ಗ ತೋರೋ ಆ
ಪನ್ನರಕ್ಷಕ ಬೇಗ ಬಾರೋ.... ||ಅ.ಪ||
ಪನ್ನಗಶಯನ ಲಕ್ಷ್ಮೀಶಾ ವೇದ
ಸನ್ನುತ ಪಾದ ಸರ್ವೇಶಾ
ಇನ್ನು ಬಿಡಿಸು ಭವಪಾಶಾ ಪ್ರ
ಸನ್ನ ರಕ್ಷಿಸೊ ಶ್ರೀನಿವಾಸಾ.... ||೧||
ನಾರದ ಗಾನವಿಲೋಲಾ ಸ್ವಾಮಿ
ಭೂರಿ ಭಕ್ತರ ಪರಿಪಾಲಾ
ಶ್ರೀ ರಮಣ ಕರುಣಾಲವಾಲ - ದೇವ
ನೀರದ ಶ್ಯಾಮ ಗೋಪಾಲಾ.....||೨||
ಕರಿರಾಜವರದ ಪ್ರಮೇಯಾ ಎನ್ನ
ನರಿತು ನಡೆಸೊ ಯೋಗಿಧ್ಯೇಯ
ಸುರಮುನಿ ಹೃದಯ ನಿಕಾಯ -ನಮ್ಮ
ಪುರಂದರ ವಿಠಲರಾಯಾ......||೩||
0 ಕಾಮೆಂಟ್ಗಳು