|| ಗೋವಿಂದ ಸ್ತುತಿ||
ದಾರಿಯ ತೋರೋ ಗೋಪಾಲ
ವಾರಿಜನಾಭ ಶ್ರೀ ವೈಕುಂಠಲೋಲ |
ಸಿಕ್ಕಿದೆ ಭವಪಾಶದೊಳಗೆ
ಲೆಕ್ಕವಿಲ್ಲದ ಜಂತುಗಳಿಗೆ |
ದಿಕ್ಕೊಬ್ಬರಿಲ್ಲವೋ ಎನಗೆ
ಕಕ್ಕಸ ಕಳೆದು ನಿನ್ನಯ ಪಾದಗಳಿಗೆ ||
ಗಜರಕ್ಷಕನು ನೀನೆಂದು
ಅಜರುದ್ರಾದಿಗಳಂದು|
ನಿಜವಾಗಿ ಪೇಳಿದರೆಂದು
ಸುಜನರೊಡೆಯನೆ ಕೇಳಿದೆ ನಾನಿಂದು||
ಸಿರಿ ಹಯವದನನೆ ಬಾರೈ
ಕರೆದೆನ್ನ ದಾರಿಯ ತೋರೈ|
ಪರಮ ಭಕ್ತರಿಗೆ ಇನ್ನಾರೈ
ಪರಮ ಪುರುಷ ನೀನಿಲ್ಲದೆ ಗತಿಯಾರೈ||
0 ಕಾಮೆಂಟ್ಗಳು