ನಾರಾಯಣನ ನೆನೆ ಮನವೇ - Narayanana Nene Manave

|| ನಾರಾಯಣ ಸ್ತುತಿ ||

 ರಚನೆ : ಶ್ರೀ ವಾದಿರಾಜರು 




ನಾರಾಯಣನ ನೆನೆ ಮನವೇ ನಾರಾಯಣನ ನೆನೆ||ಪ||


ನಾರಾಯಣನ ನೆನೆ ವರ್ಣಿಸು ಮನ್ನಿಸುಆರಾಧನೆಗಳ

ಮಾಡುತ ಪಾಡುತನೀರಾಜನದಿಂದಲರ್ಚಿಸಿ ಮೆಚ್ಚಿಸಿ

ವೇದಪಾರಾಯಣಪ್ರಿಯನ||ಅ .ಪ ||



ಅವನ ಶ್ರವಣ ಮನನ ನಿಧಿಧ್ಯಾಸನ

ಶ್ರೀವಿಷ್ಣುವಿನ ಭಕ್ತಿಮಹಾಪ್ರಸಾದಂಗಳು

ಕೈವಲ್ಯ ಪದಕಿಕ್ಕಿದ ನಿಚ್ಚಣಿಕೆ ಎಂದು

ಭಾವಜ್ಞರು ಪೇಳ್ವರೊ

ಜೀವನ ಜವನಬಾಧೆಯ ತಪ್ಪಿಸಿ

ಪಾವನ ವೈಕುಂಠಪುರದೊಳಗೆಂದೆಂದು

ಆವಾಸವನು ಮಾಡಿ ಸುಖಿಸಬೇಕಾದರೆ

ಸೇವಿಸು ವೈಷ್ಣವರ ||1||



ದ್ವಾರಾವತಿಯ ಗೋಪಿಚಂದನದಿಂದಶ್ರೀ

ರÀಮಣನ ವರ ನಾಮವ ನೆನೆ

ದೆರಡಾರೂಧ್ರ್ವ ಪುಂಡ್ರಗಳ ಧರಿಸೆಂದೆಂದು

ವೀರವೈಷ್ಣವಗುರುವಸೇರಿ

ಸಂತಪ್ತ ಸುದರುಶನ ಶಂಖ

ಧಾರಣವನು ಭುಜಯುಗದಲಿ ಮಾಡಿ

ಮುರಾರಿಯ ಮಂತ್ರಗಳವರಿಂದ

ಕೇಳುತ ಓರಂತೆ ಜಪಿಸುತ್ತಿರು ||2||



ಹರಿ ನಿರ್ಮಾಲ್ಯವ ಶಿರದಿ ಧರಿಸುತಿರು

ಹರಿ ನೈವೇದ್ಯವನೆ ಭುಂಜಿಸುತಿರುಇರುಳು

ಹಗಲು ಹರಿಸ್ಮರಣೆಯ ಬಿಡದಿರು

ದುರುಳರ ಕೂಡದಿರೊ

ಹರಿಪದ ತೀರ್ಥದ ನೇಮವಬಿಡದಿರು

ಹರಿಪರದೇವತೆ ಎಂದರುಪುತಲಿರು

ಗುರುಮುಖದಿಂದ ಸಚ್ಛಾಸ್ತ್ರ ಪುರಾಣವ

ನಿರುತದಿ ಕೇಳು ||3||



ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆ

ಅಷ್ಟಿಷ್ಟೆನ್ನದೆ ಸಕಲೇಷ್ಟಂಗಳಕೊಟ್ಟು

ಕಾಯ್ವನು ಶಕ್ರನಿಗೆ ತ್ರಿವಿಷ್ಟಪ

ಪಟ್ಟವ ಕಟ್ಟಿದವ

ದುಷ್ಟರನೊಲ್ಲ ವಿಶಿಷ್ಟರಿಗೊಲಿವ

ಅ-ನಿಷ್ಟವ ತರಿದೊಟ್ಟುವ ಜಗಜಟ್ಟಿ

ಅರಿಷ್ಟಮುಷ್ಟಿಕಾದ್ಯರÀ ಹುಡಿಗುಟ್ಟಿದ

ವಿಠಲ ಬಹು ದಿಟ್ಟ ||4||



ಕಂದ ಬಾಯೆಂದರೆ ನಂದನಿಗೊಲಿದಿ

ಹಕುಂದುಕೊರತೆ ಬಂದರೆ ನೊಂದು

ಕೊಳನುಇಂದಿರೆಯರಸ ಮುಕುಂದ ಮುಕುತಿಯ

ನಂದನವನೀವ ದೇವಸಂದೇಹವಿಲ್ಲದೆ

ಒಂದೆಮನದಿ ಸ-ನಂದನಾದಿಗಳು ಭಜಿಸಲು

ಒಲಿವ ಉ-ಪೇಂದ್ರನ ಶುಭಗುಣಸಾಂದ್ರನ

ಯದುಕುಲಚಂದ್ರನ ವಂದಿಸಿರೊ ||5||



ಓಡುವ ಅಡಗುವ ದೇವರೆ ಬಲ್ಲರು

ಬಾಡುವ ಬೇಡುವ ಮುನಿಗಳೆ

ಬಲ್ಲರುನೋಡುವ ಕೂಡುವ ಮುಕುತರೆ

ಬಲ್ಲರೊಡನಾಡುವ ರಮೆ

ಬಲ್ಲಳುಊಡುವ ಪಾಡುವ ಯಶೋದೆ

ಬಲ್ಲಳುಕಾಡುವ ಖಳರ ಮರ್ದಿಸಿ

ಹುಡಿಗುಟ್ಟಿದನಾಡೊಳು ಕೇಡುಗಳೆವ

ಕೃಷ್ಣನಿಗೀಡೆಂದಾಡದಿರು ||6||



ಆವನ ಪಕ್ಷವದಕೆದುರಿಲ್ಲ ಆವನ ಕುಕ್ಷಿಯೊಳಕ್ಕು

ಜಗತ್ರಯಆವನು ಶಿಕ್ಷಿಪ ರಕ್ಷಿಪನು ಮತ್ತಾವನು

ಪಾವನನುಆವನ ಶಿಕ್ಷೆಯ ಮಿಕ್ಕವರಿಲ್ಲ

ಕೇ-ಳಾವನುಪೇಕ್ಷೆ ಕುಲಕ್ಷಯವೆನಿಪುದುಆವನುರುಕ್ರಮ

ವಿಕ್ರಮನೆನಿಸಿದ ದೇವನಿಗಾವನೆಣೆ ||7||



ಶಿರಿದೆವಿಯು ಯಾವನಿ ಗರಸಿಯು ಸುರ |

ಘುರು ವಿರಿನ್ಚಿಪರು ಅವನ ಕುಮಾರರು |

ಊರಗಾಧಿಪಗಾವನ ಮನ್ಚ ವಿಹಗೆ-| ಶ್ವರಗಾವನ ಆಹನ ||

ಫುರಹರ ನಾವನುನ್ಗುತ ನೀರ ಪೊತ್ತ |

ಣಿರ್ಜರ ಪತಿಯಾವನ ಚರನ ಸೆವಕನಾದ ||

ಶುರರೊಲಗಾ ಹಯವದನಗಿನ್ನಾರು |

ಶರಿಯೆನ್ದುಸುರುವೆನಯ್ಯ|ಸರಿಯೆನ್ದುಸುರುವೆನಯ್ಯ||೮||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು