ಬೇಟೆಗೆ ಹೊರಟ ವೆಂಕಟರಮಣನಂತೆ - Betege Horata Venkata Ramanananthe

|| ಹರಿ ಸ್ತುತಿ ||




ಬೇಟೆಗೆ ಹೊರಟ ವೆಂಕಟರಮಣನಂತೆ 

ಉಡುಪಿ ಶ್ರೀಕೃಷ್ಣನ ಇಂದಿನ

ರೂಪ ನೋಡಲು ಬಲು ಅಂದ

ಕರತಾರೆ ಕರತಾರೆ ಶ್ರೀನಿವಾಸನ ಸುರರರಸ

ಸ್ವಾಮಿ ಶ್ರೀ ವೆಂಕಟೇಶನ||ಪ ||


ಬರಹೇಳೆ ಬರಹೇಳೆ ಬೇಗ ಕರಿಗಮನೆ

ರಂಗಗೆ ಸಿರಿರಾಣಿರಮಣ ಘನಾಂಗಗೆ

ಅರಘಳಿಗೆ ಸರಸವಲ್ಲ ಅರಸನಿಲ್ಲದವಳೆ

ಸಲ್ಲಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ ||೧||


ಸುಂದರ ಸುಂದರ ಶುಭಮಂದಿರನ್ನ

ದಯಾರಸ ಸುಂದರನ್ನ ವರಕಂಬುಕಂದರನ್ನ

ಚೆಂದಾವರೆಗಣ್ಣವನ ಸಿಂಧೂರವರದನ್ನ

ದೇವೇಂದ್ರಜಿತ ಪಾರಿಜಾತ ತಂದನ್ನ||೨||


ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ

ಬಾರದಾಯಿತೀ ಅವಸ್ಥೆಹುಟ್ಟು

ಹೊಂದಿಕಾಯಬೇಕೆಂದೊಮ್ಮೆಗೆ

ಉದಯವಾದ ಪ್ರಸನ್ನವೆಂಕಕಟರಾಯ

ಬಂದ ಫಲಿಸಿತಾನಂದ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು