ಪಚ್ಚದಲಿ ಸಾರಿಸಿ ಹವಳದಲಿ ಗುಡಿಕಟ್ಟಿ - Pachhadali Sarisi Havaladali Gudi Katti

|| ಲಕ್ಷ್ಮಿ ಆರತಿ ಹಾಡು ||




ಪಚ್ಚದಲಿ ಸಾರಿಸಿ ಹವಳದಲಿ ಗುಡಿಕಟ್ಟಿ

ಅಚ್ಚ ಮುತ್ತಿನ ರಂಗವಲ್ಲಿಯನಿಟ್ಟು|

ಅಚ್ಯುತನ ರಾಣಿ ಮಹಲಕ್ಷ್ಮೀ ಬರುತಾಳೆ ಎಂದು

ಕಟ್ಟಿದರು ಮಕರ ತೋರಣಗಳ||ಪ||


ಶ್ರಾವಣ ಮಾಸವು ಮೊದಲ ಶುಕ್ರವಾರ

ಭೋರೆಂಬ ಪಂಚ ವಾದ್ಯ ಸಹಿತ

ತಾರಾ ಚಂದ್ರ ಬಲವು ರೋಹಿಣಿ ನಕ್ಷತ್ರ ಸಹಿತಾಗಿ

ತಾ ಒಲಿದು ಬಂದಳು ಮಹಲಕ್ಷ್ಮೀ ||೧||


ಮೂರು ಮೂರು ಸಂಜೆ ಮುಡಿಯನಿಟ್ಟುಕೊಂಡು

ಮುಡಿದ ಮಲ್ಲಿಗೆ ಹೂವು ಉದುರಿಸುತ್ತಾ

ದೂರೆ ರಾಯರ ಯಾವುದು ಎನುತಲಿ

ಬಂದಳು ಮಹಲಕ್ಷ್ಮೀ ನಮ್ಮ ಮನೆಗೆ||2||


ಬಾಗೀಲಾಗಿನ ಕೂಸು ಬಾಗಿಲಾಗಿರಲಿಕ್ಕೆ

ಬಾಳೆಹಣ್ಣನೆ ಕೈಯಲಿ ಕೊಟ್ಟು

ಮೇಲಲೆ ನೂರುವರುಷ ಹೆಚ್ಚಾಗಿ

ಬಾಳೆಂದು ಹರಸಿದಳು ಕಂದಯ್ಯಗೆ||3||


ತೊಟ್ಟಿಲಾಗಿನ ಕೂಸು ತೊಟ್ಟಿಲಾಗಿರಲಿಕ್ಕೆ

ಉತ್ತತ್ತಿ ಹಣ್ಣನೆ ಕೈಗೆ ಕೊಟ್ಟು

ಮತ್ತೆ ನೂರು ವರುಷ ಹೆಚ್ಚಾಗಿ ಬಾಳೆಂದು

ಹರಸಿದಳು ನಮ್ಮ ಕಂದಯ್ಯಗೆ||4||


ಆಯವಂತನಾಗು ಛಾಯವಂತನಾಗು

ಅಂದಣವನೇರುಅರಸು ನೀನಾಗು

ಹೋಗಿ ಬರುವ ತಂಗಿಗೆ ತೌರುಮನೆಯಾಗೆಂದು

ಗೌರಮ್ಮ ಹರಸಿದಳು ಅಣ್ಣಯ್ಯಗೆ||5||


ಅಂದಣವಂತನಾಗು ಚಂದಣವಂತನಾಗು

ಅಂದಣವ ಏರು ಅರಸು ಆಗು

ಹೋಗಿ ಬರುವ ಕಂದಯ್ಯಗೆ ತೌರುಮನೆ ಆಗೆಂದು

ಹರಸಿದಳು ಮಹಾಲಕ್ಷ್ಮೀ ತಮ್ಮಯ್ಯಗೆ||6||


ಅಕ್ಕ ಮಹಲಕ್ಷ್ಮಿಗೆ ಮಾಡಿಟ್ಟ ಪಾಯಸವು

ಚಿಕ್ಕಣ್ಣ ಕಂದಯ್ಯ ತೆಗೆದುಂಡರೆ

ಕಂದಯ್ಯ ತೆಗೆದುಂಡರೆ ಮಹಾಲಕ್ಷ್ಮೀ ದೇವಿ

ಕೊಪ್ಪವನು ಅಲ್ಲಾಡಿಸಿ ನಗುತಿದ್ದಳು||7||


ತೊಟ್ಟಿಲಾಗಿನ ಕೂಸು ತೊಟ್ಟಿಲಾಗಿರಲಿಕ್ಕೆ

ಉತ್ತತ್ತಿ ಹಣ್ಣನೆ ಕೈಗೆ ಕೊಟ್ಟು

ಮತ್ತೆ ನೂರು ವರುಷ ಹೆಚ್ಚಾಗಿ ಬಾಳೆಂದು

ಹರಸಿದಳು ನಮ್ಮ ಕಂದಯ್ಯಗೆ||4||


ಆಯವಂತನಾಗು ಛಾಯವಂತನಾಗು

ಅಂದಣವನೇರುಅರಸು ನೀನಾಗು

ಹೋಗಿ ಬರುವ ತಂಗಿಗೆ ತೌರುಮನೆಯಾಗೆಂದು

ಗೌರಮ್ಮ ಹರಸಿದಳು ಅಣ್ಣಯ್ಯಗೆ||5||


ಅಂದಣವಂತನಾಗು ಚಂದಣವಂತನಾಗು

ಅಂದಣವ ಏರು ಅರಸು ಆಗು

ಹೋಗಿ ಬರುವ ಕಂದಯ್ಯಗೆ ತೌರುಮನೆ ಆಗೆಂದು

ಹರಸಿದಳು ಮಹಾಲಕ್ಷ್ಮೀ ತಮ್ಮಯ್ಯಗೆ||6||


ಅಕ್ಕ ಮಹಲಕ್ಷ್ಮಿಗೆ ಮಾಡಿಟ್ಟ ಪಾಯಸವು

ಚಿಕ್ಕಣ್ಣ ಕಂದಯ್ಯ ತೆಗೆದುಂಡರೆ

ಕಂದಯ್ಯ ತೆಗೆದುಂಡರೆ ಮಹಾಲಕ್ಷ್ಮೀ ದೇವಿ

ಕೊಪ್ಪವನು ಅಲ್ಲಾಡಿಸಿ ನಗುತಿದ್ದಳು||7||


ಮಂಗಳವಾರದ ದಿವಸ ಮಹಲಕ್ಷ್ಮೀ ತಾಯಿಗೆ

ಮಂಗಳಾರತಿ ಅಕ್ಕಯ್ಯ ಬೆಳಗೆ

ದಂಡಿಗೆಯ ಪದವಿಯ ಗಂಡು ಸಂತಾನವ

ಹಿಂಗದೆ ಕೊಡು ನನ್ನ ಅಣ್ಣಯ್ಯಗೆ||8||


ಶುಕ್ರವಾರವೆ ಅಕ್ಕ ಮಹಾಲಕ್ಷ್ಮೀಗೆ ಚೊಕ್ಕ

ಚಿನ್ನದ ಆರತಿ ಚಿಕ್ಕ ಸೊಸೆಯು ಬೆಳಗೆ

ಅಂದಾದ ಪದವಿಯನು ಗಂಡು ಸಂತಾನವನು

ಕೊಟ್ಟು ರಕ್ಷಿಸಿದಳು ಲಕ್ಷ್ಮೀ ದೇವಿಯೆ||9||


ಹಳ್ಳದಲಿ ಮೈತೊಳೆದು ಒಳ್ಳೆವಸ್ತ್ರವನುಟ್ಟು

ಕಳ್ಳತನದಲಿ ಬಂದು ಶಿವನ ಹೆಂಡತಿಯಾದೆ

ಗುಳ್ಳದಗೌರಿಗೆ ಆರುತಿಯನೆತ್ತೀರೆ ಚೆಲ್ವೆಯರು

ಸಂಭ್ರಮದಿ ಪಾಡುತಲಿ ಬೇಗ||10||


ನಿಂಬೆಯ ವನದಾಗೆ ರಂಭೆ ತಾನಿರುವಳು

ಬಂದೋರಿಗೆಲ್ಲ ಮಂಗಳ ಕೊಡುತಿದ್ದಳು

ನಿಂಬೆಯ ಹಣ್ಣಿನು ಗಂಜಿ ಪ್ರಸಾದವನು

ನಮ್ಮೆಲ್ಲರಿಗೆ ಕೊಟ್ಟಳು ಮಹಾಲಕ್ಷ್ಮೀ ದೇವಿಯೆ||11||


ಬಾಳೆಯ ವನದಾಗೆ ಭಾಮೆ ತಾನಿರುವಳು

ಬಂದೋರಿಗೆಲ್ಲ ವರವ ಕೊಡುತಿಹಳು|

ಬಾಳೆಯ ಹಣ್ಣನು ಬಹಳ ಪ್ರಸಾದವನು

ನಮ್ಮೆಲ್ಲರಿಗೆ ಕೊಟ್ಟಳು ಮಹಾಲಕ್ಷ್ಮೀ ದೇವಿಯೆ||12||


ಮುತ್ತಿನ ಆರತಿ ನವರತ್ನದಾರತಿ

ಮುತ್ತು ಮಾಣಿಕ್ಯ ಬಿಗಿದಾರತೀ

ಮುತ್ತೈದೆರೆಲ್ಲರು ಎತ್ತಿ ಪಾಡುತ್ತಿರಲು

ದೃಷ್ಟಾಂತವಾದರೆ ಆದಿಲಕ್ಷ್ಮಿ ||13||


ಮಂಗಳಾರತಿ ಶ್ಯಾಮಸುಂದರನ ರಾಣಿ

ಪ್ರತ್ಯಕ್ಷವಾದಳೆ ನಮ್ಮೆಲ್ಲರಿಗೆ

ಮಂಗಳಾರತಿ ಶ್ಯಾಮಸುಂದರನ ರಾಣಿ

ಪ್ರತ್ಯಕ್ಷವಾದಳೆ ನಮ್ಮೆಲ್ಲರಿಗೆ||14||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು