ತಿರುಪತಿ ವೆಂಕಟರಮಣನ ರೂಪಿನಲಿ - Tirupati Venkata Ramanana Rupinali

|| ವೆಂಕಟರಮಣ ಮಂಗಳ ಸ್ತುತಿ ||




ತಿರುಪತಿ ವೆಂಕಟರಮಣನ ರೂಪಿನಲಿ ಕಂಗೊಳಿಸುವ

ನಗುಮೊಗದರಸ ಉಡುಪಿ ಶ್ರೀಕೃಷ್ಣನಿಗೆ

ಜಯಮಂಗಳಂ ನಿತ್ಯ ಶುಭಮಂಗಳಂ |

ಜಗದೇಕ ವೀರನಿಗೆ ಜಗದುದರ ದೇವನಿಗೆ

ಜಗವ ಬಾಯೊಳು ತೋರ್ದಮಹಾಮಹಿಮಗೆ

ಜಗವ ಸೃಜಿಸಿದ ಹರಿಗೆ ಜಗವಪಾಲಿಪದೊರೆಗೆ

ಜಗವ ಸಂಹರಿಸುವಗೆ ಜಯ ಮಂಗಳಂ ||


ವರಮುನಿಯ ತಾಡನದಿ ಹೊರಡೆ ಲಕ್ಷ್ಮಿಯು

ಆಗ ಗಿರಿಗಿಳಿದು ಬಂದು ಹುತ್ತದೊಳಗಿರಲು

ಪರಮೇಷ್ಠಿ ಅರಸಿಪಾಲ್ಗರಿಯೆಗೋಪಾಲಕನ

ವರಕುಠಾರದ ಪೆಟ್ಟಿಗಂಜಿ ನಟಿಸಿದವಗೆ ಜಯಮಂಗಳಂ ||1||


ಗಿರಿಗಿರಿಯ ಸಂಚರಿಸಿ ಅಡವಿಮೃಗ ಬೆನ್ನಟ್ಟಿ

ಪರಮಪದ್ಮಾವತಿಯ ಮನದಿ ಕಂಡು

ದುರುಳ ಮಾತುಗಳಾಡಿ ಶಿಲೆಯತಾಡಿತನಾಗಿ

ಕೊರವಂಜಿ ರೂಪದಿಂ ಕಣಿಯ ಹೇಳಿದಗೆ ಜಯಮಂಗಳಂ

 ||2||


ಆಕಾಶರಾಜನಿಗೆ ಅಳಿಯನೆನಸಿಕೊಂಡು

ಆಕೆ ಪದ್ಮಾವತಿಯ ಕೂಡಿದವಗೆ

ಬೇಕಾದ ವರಗಳನು ಕೊಡುತ ಭಕ್ತರ ಪೊರೆವ ಶ್ರೀಕಾಂತ

ಕಮಲನಾಭವಿಠ್ಠಲಗೆ ಜಯಮಂಗಳಂ||3||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು