ಕರುಣದಿ ಕಣ್ಣು ತೆರೆಯೆ - Karunadi Kannu Thereye

|| ಲಕ್ಷ್ಮಿ ಸ್ತುತಿ ||

ರಚನೆ : ಶ್ರೀ ಕಮಲೇಶ ವಿಠಲ ದಾಸರು



ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII

ಧರಣಿಯೊಳಗೆ ಸುಂದರತರ ಕೊಲ್ಹಾ-

ಪುರ ವಾಸಿನಿ ಭಕುತರ ಸದಾ ಪೊರೆಯೇ IIಅಪII 


ವಿಧಿಭವಾದಿಗಳ ಸದನಗಳಿಗೆ ಅ-

ಭ್ಯುದಯ ಕಟಾಕ್ಷದಿ ಸುದಯವ ಸುರಿಸೆ II೧II 


ಕಡು ಬೆಡಗಿನ ನಿನ್ನಡಿ ದಾವರೆಗಳ

ಬಿಡದೆ ಭಜಿಪರಿಗೆ ವರ ಕೊಡು ಸುಂದರಿಯೆ II೨II 


ಸುಂದರಾನನೆ ಅರವಿಂದ ಮಲ್ಲಿಗೆ

ಮಂದಹಾಸ ಮಕರಂದವ ಸುರಿಯೆ II೩II 


ಬಡವರಭೀಷ್ಟವ ಕೊಡುವಳೆಂದು ಬಡ

ಬಡಿಸಿ ಬಂದೆ ನಿನ್ನೊಡಲಿನ ಮರಿಯೆ II೪II 


ಕೊಟ್ಟರೆ ಕಮಲೇಶ ವಿಠಲರಾಯನ 

ಪಟ್ಟದರಸಿಯೆಂಬೊ ಕಟ್ಟಲೆ ಕರೆಯೆ II೫II






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು