ಜನಮನದಲಿ ಸದ್ಭಾವನೆ ಬಿತ್ತಲು - Janumanadali Sadbhavane Bittalu

|| ರಾಘವೇಂದ್ರ ಸ್ತುತಿ ||




ಜನಮನದಲಿ ಸದ್ಭಾವನೆ ಬಿತ್ತಲು

ಇನ್ನೊಮ್ಮೆ ಬಾ ಗುರುರಾಯ |

ಪಾಪವಿಲೋಕದಿ ತುಂಬಿ ನಿಂತಿದೆ

ಪಾಪಹರಣ ನೀ ಬೇಗನೆ ಬಾರೋ ||ಪ||


ತನುಮನ ಧನವನು ನಿನಗರ್ಪಿಸಿದೆ |

ಇನಿತು ಪೇಳುತಲಿ ನಾ ಪಾಪದಿ ನೊಂದೆ ||

ದೀನರ ರಕ್ಷಿಸು ಎಂದು ನಾ ಬೇಡಿದೆ |

ಗುರುರಾಜ ನಿನ್ನ ಕಾಡಿ ನಾ ಬೇಡಿದೆ ||೧||


ಗಂಗಾ ನದಿಯ ಚೆಲ್ವಿಕೆ ಪಡೆದ |

ತುಂಗೆಯ ದಡದಲ್ಲಿ ವಾಸ ಮಾಡಿದ ||

ಜನುಮ ಜನುಮಗಳ ಪಾಪವ ತೊಳೆಯಲು |

ರಾಘವೇಂದ್ರಗುರು ಇನ್ನೊಮ್ಮೆ ನೀ ಬಾರೋ ||೨||


ಮಂತ್ರಾಲಯದ ಚೆಲುವ ಚಂದಿರ |

ಅಂತರಗದಲ್ಲಿ ನೆಲೆಸಿ ನಿರಂತರ ||

ಕಂತುಪಿತನೇ ಶ್ರೀ ಪ್ರಾಣೇಶ ವಿಠಲನೆ |

ಸಂತಸದೀ ನೀ ಭಕುತರ ಪೊರೆಯಲು ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು