|| ಹರಿ ಸ್ತುತಿ ||
ವೇದವ ತಂದು ವಿಧಿಗೀವಂದೆ ನೀ
ಸಾಧು ಜನರ ಸಲಹಲಿ ಬಂದೆ ||pa||
ಮೋದದಿಂದೆಮ್ಮ ಮನದಿ ನಿಂದೆ ನೀ
ಬಾಧಿಪ ದುರಿತತತಿಯ ಕೊಂದೆ||a.pa||
ಸಕಲ ಸುರರಿಗೆ ಶಿರೋರನ್ನ ನೀ
ಅಕಳಂಕ ಆಶ್ರಿತ ಜನಮಾನ್ಯ
ನಿಖಿಲ ನಿಗಮನಿಕರದಿ ವರ್ಣ್ಯ ನೀ
ಕರುಣಾಕಟಾಕ್ಷದಿ ನೋಡೆನ್ನ ||1||
ಕೈವಲ್ಯಪದವಿಯ ಕೊಡಬಲ್ಲ ನಿನ್ನ
ಸೇವಿಪ ಸುಜನರಿಗೆ ಎಣೆಯಿಲ್ಲ
ಭಾವಜಕೋಟಿಯಿಂದ ಅತಿ ಚೆಲ್ವ ನೀ
ಶ್ರೀವನಿತೆಗೆ ಸಿಲುಕುವನಲ್ಲ ||2||
ಹಯವದನ ಹೃದಯಸದನ
ಜಯ ಶಶಿವರ್ಣ ಜಗತಿಪೂರ್ಣ
ಭಯಹರ ಭಾಸುರ ಸಿರಿಚರಣನಿನ್ನ
ದಯಪಾತ್ರಾನು ಉದ್ಧರಿಸೆನ್ನ ||3||
0 ಕಾಮೆಂಟ್ಗಳು