|| ಶ್ರೀರಾಮ ಸ್ತುತಿ ||
ರಾಗ : ಸುರುಟಿ
ತಾಳ : ಆದಿ
ಕೀರ್ತಿಸಿ ಜನರೆಲ್ಲ ಹರಿಯ ಗುಣ
ಕೀರ್ತಿಸಿ ಜನರು ಕೃತಾರ್ಥರಾಗಿರೊ ||ಪ||
ಆವನು ವನದೊಳಗೆ ನಿತ್ಯದಿ
ಬಾಹ ಜನರ ಬಡಿದು
ಜೀವನ ಮಾಳ್ಪ ಕಿರಾತನು ಕೀರ್ತಿಸೆ
ತಾ ಒಲಿದಾತನ ಕೋವಿದನೆನಿಸಿದ ||೧||
ಆವನ ಪಾದರಜ ಸೋಕಲು
ಆ ವನಿತೆಯ ಜಡ
ಭಾವವ ತೊಲಗಿಸಿ ಆ ವನಿತೆಯ
ಪಾವನ ಮಾಡಿದ ದೇವಾದಿ ದೇವನೆ ||೨||
ಅಂದು ಶಬರಿ ತಾನು ಪ್ರೇಮದಿ
ತಿಂದ ಫಲವ ಕೊಡಲು
ಕುಂದು ನೋಡದೆ ಆನಂದದಿ ಗ್ರಹಿಸಿ
ಕುಂದದ ಪದವಿಯನಂದು ಕೊಟ್ಟವನ ||೩||
ದುಷ್ಟ ರಾವಣ ತಾನು ಸುರರಿಗೆ
ಕಷ್ಟ ಬಡಿಸುತಿರಲು
ಪುಟ್ಟಿ ಭುವನದೊಳು ಕುಟ್ಟಿ ಖಳದ ಸುರ -
ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ ||೪||
ತನ್ನ ನಂಬಿದ ಜನರ ಮತ್ತೆ ತಾ-
ನನ್ಯರಿಗೊಪ್ಪಿಸದೆ
ಮುನ್ನಿನಘವ ಕಳೆದು ಕಾಪಾಡವ
ಘನ್ನ ಮಹಿಮ ಶ್ರೀರಂಗ ವಿಠಲನ್ನ
0 ಕಾಮೆಂಟ್ಗಳು