|| ಬಿಂದು ಮಾಧವ ಸ್ತುತಿ ||
ಸಾಹಿತ್ಯ ಸಂಗೀತ ಗಾಯನ: ವಿದ್ವಾನ್ ಶ್ರೀ ಹರೀಶ್ ಪಾಂಡವ್ ಮೈಸೂರು
ಬಿಂದು ಮಾಧವ ನಮ್ಮ ಕಾಯುವ ||ಪ||
ಅವರ ನಾಮ ಸ್ಮರಣೆ ನಾವು ನಿತ್ಯ ಮಾಡುವ
ಶಕ್ತಿಯಾಗಿ ನಮ್ಮ ಹಿಂದೆ ತಾನೆ ನಿಲ್ಲುವ
ದಾರಿ ದೀಪವಾಗಿ ನಮ್ಮ ಬಾಳ ಬೆಳಗುವ
ಮುನ್ನಡೆಸಿ ಹರಸುವ ಕೈಹಿಡಿದು ನಡೆಸುವ ||೧||
ಮಾರುತಿಯ ರೂಪದಲಿ ಬೆಲಗೂರಲಿ ನಿಂದೆ
ಕಷ್ಟವೆಂದು ಬೇಡಿದವರ ಬಳಿಗೆ ಓಡಿ ಬಂದೆ
ಸರ್ವವ್ಯಾಪಕ ನೀನು ನಿತ್ಯ ಸತ್ಯ ತಂದೆ
ಅರಸಿ ಬಂದ ಭಕುತರ ಪೊರೆದು ಕಾಯೊ ಮುಂದೆ||೨||
ನಾದ ಗಾನ ಲೋಲನು ತಾ ಹಾಡಿ ಭಜಿಸೆ ಒಲಿಯುವನು
ಶ್ರೀ ರಾಮ್ ಜೈ ರಾಮ್ ಹಾಡಿದೆಂದು ಹೇಳಿ ಪಾಪ ಕಳೆಯುವನು
ನರ ರೂಪದ ಭುವಿಗೆ ಬಂದ ಹನುಮ ನೀನೆ ಗುರುವೇ
ಜಗವನುದ್ಧರಿಸಲೆಂದು ಧರೆಗೆ ಇಳಿದ ಪ್ರಭುವೇ ||೩||
0 ಕಾಮೆಂಟ್ಗಳು