|| ಹನುಮ ಸ್ತುತಿ ||
ಮುತ್ತಿನುಂಗುರ ರಾಮ ಕೊಟ್ಟ ಹನುಮಗೆ |
ಮಿತ್ರ ನೋಡಿ ಬಾ ಎಂದು ಉತ್ತರ ಹೇಳಿದ ॥
ಏಳು ಶರಧಿಯ ಹನುಮ ಹೇಗೆ ದಾಟಿದ |
ಪೋಗಿ ಲಂಕೆಯ ಪುರವ ಹೇಗೆ ತಲುಪಿದ ॥
ಊರ ಹೊಕ್ಕನು ಕೇರಿ ಕೇರಿ ಮನೆಗಳ |
ದಾರಿ ಕಾಣದೆ ಹನುಮ ಗಾಬರಿಗೊಂಡನು ॥
ಅಶೋಕ ವನದೊಳು ಸಾಧ್ವಿ ಸೀತಾದೇವಿಯು |
ದೂತ ಹನುಮನ ಕಂಡು ಭೀತಿಗೊಂಡಳು ॥
ಅಂಜಬೇಡವೆ ತಾಯಿ ಅಂಜನ ಕುವರನು |
ಎಂದು ರಾಮನ ಮುದ್ರೆಯ ತಂದು ಕೊಟ್ಟನು ||
ಬಾಲ ಸುತ್ತಿದ ಬಲದ ಹಸ್ತ ಎತ್ತಿದ |
ಬಾಳೆ ಗೊನೆಗಳ ಕಿತ್ತು ಧೂಳಿ ಮಾಡಿದ ॥
ಎನ್ನ ಕರುಣಿಸು ಸ್ವಾಮಿ ಎಂದು ಬೇಡಿದ |
ಎಂದು ಹೇಳುತ ರಾಮನ ಪಾದಕೆರಗಿದ ||
0 ಕಾಮೆಂಟ್ಗಳು