ಯಾಕೆ ನಿರ್ದಯನಾದೆಯೊ - Yake Nirdayanadeyo

|| ಶ್ರೀಹರಿ ಸ್ತುತಿ ||




ಯಾಕೆ ನಿರ್ದಯನಾದೆಯೊ ಶ್ರೀ ಹರಿಯೇ 

ಯಾಕೆ ನಿರ್ದಯನಾದೆಯೊ||ಯಾಕೆ||


ಶ್ರೀಕಾಂತ ಎನ ಮೇಲೆ 

ಎಳ್ಳಷ್ಟು ದಯವಿಲ್ಲ||ಶ್ರೀಕಾಂತ||

                                           ||ಯಾಕೆ ||


ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು

ಬಿಂಕದಿ ಪ್ರಹ್ಲಾದನ ಅಪ್ಪಿಕೊಂಡೆ||ಕಂಗೆಟ್ಟು||

ಮಂಗಳಪದವಿತ್ತು ಮನ್ನಿಸಿದೆ ಅವನಿಗೆ||2||

ಬಂಗಾರವೆಷ್ಟು ಕೊಟ್ಟನು ಹೇಳೊ ಹರಿಯೇ....

                                                  ||ಯಾಕೆ ||


ಸಿರಿದೇವಿಗೆ ಹೇಳದೆ ಸೆರಗು ಸಂಹರಿಸಿದೆ

ಗರುಡನ ಮೇಲೆ ಗಮನವಾಗಿದೆ||ಸಿರಿದೇವಿಗೆ||

ದಯದಿಂದ ನೀ ಬಂದು ಕರಿಯನುಧ್ಧರಿಸಿದೆ||2||

ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೇ...

                                                 ||ಯಾಕೆ ||


ಅಜಮಿಲನು ಅಣ್ಣನೆ , ವಿಭೀಷಣನು ತಮ್ಮನೆ

ನಿಜದಿ ರುಕ್ಮಾಂಗಧನು ನಿನ್ನ ಮೊಮ್ಮಗನೆ

                                           ||ಅಜಮಿಲನು||

ಭಜನೆಗವರೆ ಹಿತರೆ ನಾ ನಿನಗೆ ಅನ್ಯನೆ||2||

ತ್ರಿಜಗಪತಿ ಸಲಹೆನ್ನ ಪುರಂದರವಿಠ್ಠಲ

                                           ||ಯಾಕೆ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು