|| ತತ್ವ ಪದ ||
ರಚನೆ : ಮೈಸೂರು ಶಿವರಾಮ ಶಾಸ್ತ್ರಿಗಳು
ತಾನೆನ್ನಬಹುದೇ ಈ ದೇಹವ। ತಾನೆನ್ನಬಹುದೇ।
ಜ್ಞಾನ ಮೂರುತಿ ತಾನು। ಕಾಣುತೆಲ್ಲವ ನಿಲ್ಲಿ |
ಪ್ರಾಣ ಹಾರಿದ ಮೇಲೆ ಹೂಳುವೊ ಹಣವಿದ ॥ಪ॥
ನಿತ್ಯನಲ್ಲೆಂದೆಸುಪ್ತಿಯೊಳಿದ್ದ| ಸತ್ವವ ಕೊಂದೆ।
ಮೃತಿಕೆಯನು ತಂದೆ। ಭೃತ್ಯನಾನದಕೆಂದೆ।
ಸತ್ತು ಹುಟ್ಟುತ ಬಂದೆ ಪೃಥ್ವಿಯೊಳಗೆ ಬೆಂದೆ ||೧||
ಯಾರು ನೀ ಪೇಳೈ|ದೇಹವ ಬಿಟ್ಟು ಬ್ಯಾರೇ ನೀನೇಳೈ|
ತೋರುವಿ ತನುವಿಗೆ ಬೇರೆ ನೀನಾದೊಡೆ।
ಹಾರಿತಿ ಜಗವೆಲ್ಲ ತೋರದಿನ್ನೇನಿಲ್ಲಡ ||೨||
ಪೊರೆಯೊ ಶ್ರೀ ಹರಿಯೇ। ಎಂಬುವದೊಂದೆ |
ಹರಿಯ ನೀನರಿಯೇ।
ಹರಿ ಇರುವಂದವನರಿಯಲು ನೀ ನಮ್ಮ |
ಗುರು ಗುರುಶಂಕರಾರ್ಕನೋಳ್ ಬೆರೆಯೋ ನರಕುರಿಯೇ॥೩||
0 ಕಾಮೆಂಟ್ಗಳು