|| ಹರಿ ಸ್ತುತಿ ||


ಬದುಕೆಂಬ ರಥದಲ್ಲಿ ಹರಿನಾಮ ಬಲುಮುಖ್ಯ 

ಇದನರಿತು ಬಾಳಯ್ಯ ಹೇ ಮಾನವ||ಪ||


ಇರಬೇಕು ನಾವಿಲ್ಲಿ ಜಗದ ಚಿಂತೆಯ ತೊರೆದು 

ಪರರ ಬೇಡದೆ ಜೀವನವ ನಡೆಸಬೇಕು|

ಇರುವ ತನಕವು ದಾನ ಸತ್ಕರ್ಮ ಮಾಡುತ್ತ 

ಕರುಣಾಳು ಕೃಷ್ಣನನು ನುತಿಸುತಿರಬೇಕು|| 


ಕಲಿಯುತ್ತ ವಿದ್ಯೆಗಳ ಬಿಡುತ ಮೋಹವ ನಿರತ 

ತಿಳಿದ ವಿಷಯವನರಿತು ಕಲಿಸಿ ಕೊಡಬೇಕು| 

ಬೆಳೆಸುತ್ತ ಭಕ್ತಿಯನು ಹೊಸಕನಸ ಕಾಣುತ್ತ 

ನಳಿನನಾಭನ ಪೂಜೆ ದಿನ ಮಾಡಬೇಕು||


ತರಿಯುತರಿಷಡ್ವರ್ಗಗಳ ಮುಗ್ದ ಮನ ಗೆಲುತ

ಹಿರಿಯರಿಗೆ ಗೌರವವ ನೀಡೊ ಗುಣವಿರಲಿ|

ಗುರುದಯೆಯ ಪಡೆಯುತ್ತ ಮಿತ್ರರೊಲವನುಗಳಿಸಿ 

ಸಿರಿಯರಸನನು ಭಜಿಸೊ ಸುಪ್ರಶಾಂತದಲಿ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು