| ರಾಮಸ್ತುತಿ |
ರಾಗ: ಉದಯರವಿ ಚಂದ್ರಿಕೆ
ತಾಳ: ಆದಿ
| ಇದೇ ಮಹಾ ನಾಮ | ಪರಮ ರಾಮ ನಾಮ ||
ಪರಮಾತ್ಮನ ಧ್ಯಾನಾ | ಈ ನಾಮ || ಆ... |
ಪರಮಾತ್ಮನ ಧ್ಯಾನ ಈ ನಾಮ ||
ಇದೇ ಮಹಾ ನಾಮ ||
೧ | ಶಿಲೆಯಮೆಟ್ಟಿವನಿತೆಯಗೈದು | ಶಿವಧನವ ಮುರಿದನು ರಾಮ |
ಶಿವಭಕ್ತ ರಾವಣನನ್ನು | ಸಂಹರಿಸಿ ಮೆರೆದನು ರಾಮ ||
ಹರಿಯು ಹರನು | ಒಂದೇ ಎಂದು | ಸಾರಿ ಸಾರಿ ಹೇಳುವ ನಾಮ ||
ಇದೇ ಮಹಾ ನಾಮ |
೨ || ಚಂದ್ರಸೇನ ನಂಬಿದ ನಾಮ | ಜಾಂಬವಂತ ಜಪಿಸಿದ ನಾಮ ॥
ಸುಗ್ರೀವ ಸಾರಿದ ನಾಮ | ತಾಯಿ ಶಬರಿ ಹಾಡಿದ ನಾಮ ॥
ಜನನ ಮರಣ ಕಳೆಯುವ ನಾಮ || ಎಂದೂ ಯಾರೂ ಮರೆಯದ ನಾಮ |
|| ಇದೇ ಮಹಾ ನಾಮ | ಪರಮರಾಮ ನಾಮ |
೩ ॥ ಸೂರ್ಯನಂತೆ ಬೆಳಗುವ ನಾಮ ॥ ಚಂದ್ರನಂತೆ ಹೊಳೆಯುವ ನಾಮ ||
ಸೂರ್ಯ ಚಂದ್ರರಂತೆ ಬೆಳಗೋ | ಈ ನಮ್ಮ ಬಾಳಿನ ನಾಮ ॥
ಭಕ್ತಿಭಾವ ತುಂಬಿದ ನಾಮ | ಎಂದೂ ಯಾರೂ ಮರೆಯದ ನಾಮ ||
ಇದೇ ಮಹಾ ನಾಮ ||
೪ || ಮನದಿ ನೆನೆದ ಗೀತೆಗಳೆಲ್ಲಾ | ಮಧುರವಾಗಿ ಸವಿಯುವ ನಾಮ ||
ಸವಿಯಾದ ಜೀವನವೆಲ್ಲಾ | ಪ್ರಿಯವಾದ ರಾಮನಾಮ |
ಭಕ್ತಿಭಾವ | ತುಂಬಿದ ನಾಮ | ಎಂದೂ ಯಾರೂ ಮರೆಯದ ನಾಮ ||
। ಇದೇ ಮಹಾ ನಾಮ | ಪರಮ ರಾಮನಾಮ ॥
ಶ್ರೀ ವೀರಪ್ರತಾಪ ಭಜನಾ ಮಾಲಿಕೆ
ಸೀತಾಮಾತೆಯು ಆಂಜನೇಯನಿಗೆ ಮುತ್ತಿನ ಹಾರ ನೀಡಿದ ಕಥೆ
ಯುದ್ಧದಿಂದ ವಿಜಯಶಾಲಿಯಾಗಿ ಹಿಂತಿರುಗಿದ ನಂತರ, ರಾಮನು ಯುದ್ಧದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಬಹುಮಾನ ನೀಡುತ್ತಿದ್ದನು. ಉಡುಗೊರೆಯಾಗಿ ಏನು ಬೇಕು ಎಂದು ಹನುಮನನ್ನು ಕೇಳಿದಾಗ, ಹನುಮಾನ್ ಏನನ್ನೂ ತೆಗೆದುಕೊಳ್ಳಲು ನಿರಾಕರಿಸಿದನು. ಈ ವಿನಯವನ್ನು ನೋಡಿದ ಸೀತಾ ಹನುಮನಿಗೆ ತನ್ನ ಮುತ್ತಿನ ಹಾರವನ್ನು ಕೊಟ್ಟಳು. ಹನುಮಂತ ಉಡುಗೊರೆಯನ್ನು ಸ್ವೀಕರಿಸಿದನು, ನಂತರ ಪ್ರತಿ ಮುತ್ತುಗಳನ್ನು ಹಲ್ಲುಗಳಿಂದ ಒಡೆಯಲು ಪ್ರಾರಂಭಿಸಿದನು. ಆಶ್ಚರ್ಯಚಕಿತಳಾದ ಸೀತಾ ಮಾತೆ, "ಮುತ್ತುಗಳನ್ನು ಏಕೆ ಒಡೆಯುತ್ತಿದ್ದೀಯಾ" ಎಂದು ಹನುಮನನ್ನು ಕೇಳಿದಳು. ಅದಕ್ಕೆ ಆಂಜನೇಯನು ನಾನು ಈ ಮುತ್ತುಗಳಲ್ಲಿ ನನ್ನ ಪ್ರಭು ಶ್ರೀರಾಮಚಂದ್ರನನ್ನು ಹುಡುಕುತ್ತಿದ್ದೇನೆ ಎಂದು ಉತ್ತರಿಸಿದನು. ಮತ್ತು ಆ ಮುತ್ತುಗಳಲ್ಲಿ ತನ್ನ ಪ್ರಭುವಾದ ಶ್ರೀರಾಮಚಂದ್ರನೇ ಇದ್ದಾನೆ ಎಂದು ಆಂಜನೇಯನು ನಂಬಿದ್ದನು. ಆಸ್ಥಾನದ ಮಂತ್ರಿಗಳು ಹನುಮಾನ ಭಕ್ತಿಯನ್ನು ಗೇಲಿ ಮಾಡಲು ಪ್ರಾರಂಭಿಸಿದರು, ಮತ್ತು ಅವರಲ್ಲಿ ಒಬ್ಬ ಹನುಮನನ್ನು ಕೇಳಿದರು, "ನಿನ್ನ ದೇಹದಲ್ಲಿ ರಾಮ ಕೂಡ ಇದ್ದಾನೆಯೇ" ಎಂದು. ಇದಕ್ಕೆ ಪ್ರತಿಕ್ರಿಯೆಯಾಗಿ, ಹನುಮಂತ ತನ್ನ ಎದೆಯನ್ನು ಕೈಗಳಿಂದ ಸೀಳಿದನು ಮತ್ತು ಹೃದಯದಲ್ಲಿ ವಾಸಿಸುತ್ತಿರುವುದು ಶ್ರೀ ರಾಮ ಮತ್ತು ಸೀತಾ ಮಾತ್ರ ಎಂದು ತೋರಿಸಿದನು. ಅವನ ಭಕ್ತಿಯಿಂದ ಎಲ್ಲರೂ ಆಘಾತಕ್ಕೊಳಗಾದರು ಮತ್ತು ಅವನನ್ನು ಅಭಿನಂದಿಸಿದರು. ಇಂತಹ ಪರಮ ಭಕ್ತನಾದ ಆಂಜನೇಯನ ಪ್ರಭು ಶ್ರೀರಾಮಚಂದ್ರನನ್ನು ಅನುದಿನವು ಭಜಿಸೋಣ.
ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್
0 ಕಾಮೆಂಟ್ಗಳು