||ಹರಿನಾಮ ಸ್ತುತಿ ||
ರಾಗ : ಹಿಂದೋಳ
ತಾಳ : ಆದಿ
kannadabhajanlyrics.com
|| ಇಷ್ಟು ದಿನ ಈ ವೈಕುಂಠ |
ಎಷ್ಟು ದೂರವೋ ಎನ್ನುತಲಿದ್ದೆ ||
ದೃಷ್ಟಿಯಿಂದಲಿ | ನಾನು ಕಂಡೆ |
ಸೃಷ್ಟಿ ಈಶನೆ ಶ್ರೀರಂಗ ಶಾಯಿ ||
ಇಷ್ಟು ದಿನ || ಪಲ್ಲವಿ||
|| ಎಂಟು ಏಳನು | ಕಳೆಯದರಿಂದೆ |
ಭಂಟರೈವರ ತುಳಿದುದರಿಂದೆ ||
ತುಂಟನೊಬ್ಬನ | ತರಿದುದರಿಂದೆ |
ತುಂಟ ನಾಟಕ ಶ್ರೀರಂಗಶಾಯಿ ||
॥ ವಜ್ರ ವೈಢೂರ್ಯ । ತೊಲೆಗಳ ಕಂಡೆ ।
ಪ್ರಜ್ವಲಿಪಮಹ । ದ್ವಾರವ ಕಂಡೆ ॥
ನಿರ್ಜರಾದಿ ಮುನಿಗಳ ಕಂಡೆ ।
ದುರ್ಜನಾಂತಕ ಶ್ರೀರಂಗ ಶಾಯಿ ॥ ಇಷ್ಟು ದಿನ ॥
ರಂಭೆ ಊರ್ವಶಿ । ಮೇಳವ ಕಂಡೆ ।
ತುಂಬುರು ನಾರದ ಮುನಿಗಳ ಕಂಡೆ ।
ಅಂಬುಜೋದ್ಧವ । ರುದ್ರರ ಕಂಡೆ ।
ಶಂಬುರಾರಿ ಪಿತ । ಶ್ರೀರಂಗ ಶಾಯಿ ॥ ಇಷ್ಟು ದಿನ
||ನಾಗಶಯನ ಮೂರ್ತಿಯ ಕಂಡೆ ||
ಯೋಗಿ ಭೂಷಣ ಶಿವನನು ಕಂಡೆ ॥
ಭಾಗವತರ ಸಮ್ಮೇಳನ ಕಂಡೆ ।
ಕಾಗಿನೆಲೆಯಾದಿ । ಕೇಶವನಾ ಕಂಡೆ ॥ ಇಷ್ಟು ದಿನ ॥
0 ಕಾಮೆಂಟ್ಗಳು