|| ಹನುಮ ಸ್ತುತಿ ||
ರಚನೆ : ಶ್ರೀ ಶ್ರೀ ಬಿಂದುಮಾಧವ ಸದ್ಗುರುಗಳು
kannadabhajnlyrics.com |
ಬಳಲಿ ಬಳಲಿ ನಾನು ಸೋತಿಹೆನಯ್ಯಾ।।
(ಬೆಂಡಾದೆನಯ್ಯಾ)
ದೇಶದೇಶವ ಸುತ್ತಿ ಕೋಶವೋದಿ ನಿನ್ನಾ
ಕಾಣದೆ ಹಂಬಲಿಸಿ ಬಂದು ನಿಂದಿಹೆನಯ್ಯಾ ।।೧|।
ಮಾಯಾಮಡುವಿನೊಳಗೆ ಮುಳುಗಿ ಸೋತಿಹೆನಯ್ಯಾ
ಬಂಧುಬಳಗವು ನೀನೇ ಎಂದು ನಂಬಿದೆನಯ್ಯ।। ೨ ।।
ತಾರಕಬ್ರಹ್ಮನೇ ತಡವಿನ್ಹ್ಯಾತಕೋ
ಒಲಿದು ಪಾಲಿಸಿ ಎನ್ನ ಸಲಹಲು ಬಾರೋ ॥ ೩ ॥
ದೇಶ ದೇಶವ ಸುತ್ತಿ ಹಲವು ಜನರನಂಬಿ
ಮೋಸಹೋದೆ ಸ್ವಾಮಿ ಬಡವಾದೆ ಹರಿಯೇ ॥೪ ॥
ಬರೀ ಭ್ರಮೆಯಿಂದಲಿ ಜಗವನಂಬಿದೆ ನಾನು
ಜಗದೊಡಯ ಶ್ರೀ ರಘುರಾಮ ದಾಸನೇ ।।೫ ||
ವಿಶ್ವವಂದ್ಯನು ನೀನು ಕಾರುಣಿಕನು ನೀನು
ಹಣೆಯ ಬರಹ ತಿದ್ದಿ ಸಲಹುವೆ ನೀನು
ದೇವಾದಿದೇವ ಶ್ರೀ ವೀರಪ್ರತಾಪನೆ ॥ ೬॥
ಆದಿಮೂರುತಿ ನೀನು ವೇದಮೂರುತಿ ನೀನು
ಬೋಧಿಸಿ ಜ್ಞಾನವ ಬುದ್ದಿಯೂಳ್ ಇರಿಸೊ
ವಿಶ್ವವಂದ್ಯನೆ ಶ್ರೀ ವೀರಪ್ರತಾಪನೆ ॥೭॥
ಬೆಲಗೂರ ಹನುಮನ ಬಲ್ಲವರೇ ಬಲ್ಲರು
ಬಲ್ಲಿದ ಜನರಿಗೆ ಕರುಣೆ ತೋರುವ ಸ್ವಾಮಿ ॥೮ ॥
ಬಿಂದುಮಾಧವ ಮನದಿ ನೆಲೆನಿಂತ ಸ್ವಾಮಿ ನೀ
ಹೃದಯಾಂತರಂಗದ ವಿಜಯಮಾರುತಿ ನೀನೇ ।। ೯॥
ಕಪಿರಾಜ ನಿನ್ನಯ ಕರುಣೆಯ ತೋರೋ ।।
ತಮ್ಮ ಆರಾಧ್ಯ ದೇವ ವೀರಪ್ರತಾಪನಲ್ಲಿ ಸದ್ಗುರು
ಬಿಂದುಮಾಧವರ ಮನದಾಳದ ಪ್ರಾರ್ಥನೆ
0 ಕಾಮೆಂಟ್ಗಳು