|| ಶ್ರೀ ಹನುಮತ್ ಸ್ತುತಿ ||
![]() |
| kannadabhajanlyrics.blogspot.com |
ವೀರ ಹನುಮ ಬಹು ಪರಾಕ್ರಮ ಜಗದಿ ತಾ ।
ಸುಜ್ಞಾನ ಇತ್ತು ಪಾಲಿಸೆನ್ನ ಜೀವರೋತ್ತಮ ॥ಪ॥
ರಾಮ ದೂತನೆನಿಸಿಕೊಂಡೆ
ರಾಕ್ಷಸರ ವನವನ್ನೆಲ್ಲ ಕಿತ್ತು ಬಂದೆ
ಜಾನಕಿಗೆ ಮುದ್ರೆ ಇತ್ತು ಜಗತಿಗೆಲ್ಲ ಹರುಷವಿತ್ತು
ಚೂಡಾಮಣಿಯ ರಾಮಗಿತ್ತು
ಮಿಲೋಕಕೆ ಮುದ್ದಿಸಿ ಮೆರೆವ
॥ ಗೋಪಿ ಸುತನ ಪಾದ ಪೂಜಿಸಿ
ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
ದೌಪತಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ॥
ಮಧ್ಯ ಗೇಹನಲ್ಲಿ ಜನಿಸಿ ನೀ
ಬಾಲ್ಯದಲ್ಲಿ ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದುಪುರಂದರ ವಿಠಲ ದಾಸ ॥

0 ಕಾಮೆಂಟ್ಗಳು