ಮಂಗಳಾರತಿ ಹಾಡು - ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ, Mangalarathi Thandu Belagire

|| ಮಂಗಳಾರತಿ ಹಾಡು ||


ರಚನೆ: ಹರಪನಹಳ್ಳಿ ಭೀಮವ್ವ(ಭೀಮೇಶ ಕೃಷ್ಣ)




ಮಂಗಳಾರತಿ ತಂದು ಬೆಳಗಿರೆ

ಅಂಬುಜಾಕ್ಷನ ರಾಣಿಗೆ || ಪ ||

ಅಂಗನೇಯರೆಲ್ಲಾ ನೆರೆದು

ಮಂಗಳಾರತಿ ಎತ್ತಿರೆ ॥ ಅ.ಪ ||


ಶುದ್ಧ ಸ್ನಾನವ ಮಾಡಿ ನದಿಯೊಳು |

ವಜ್ರ ಪೀಠದಿ ನೆಲೆಸಿದೆ |

ತಿದ್ದಿ ತಿಲಕ ತೀಡಿದಂತ |

ಮುದ್ದು ಮಂಗಳ ಗೌರಿಗೆ ॥ ೧॥ 


ಎರೆದು ಪೀತಾಂಬರವ ನುಡಿಸಿ |

ಸರ್ವಾಭರಣವ ತೊಡಿಸಿರೆ ॥

ಹರಳಿನೋಲೆ ಮೂಗುತಿಯನ್ನಿಟ್ಟ |

ವರ ಮಹಾಲಕ್ಷಿ ದೇವಿಗೆ ॥| ೨॥ 


ಉಟ್ಟ ಪೊಡವಿಯ ಕಷ್ಟ ಕಳೆವಳು |

ಕೊಟ್ಟಳು ಅರಸಿನ ಸಿರಿಯನು ॥

ಹೆತ್ತ ಕುವರ ತೋರಿದಂತ |

ಶುಕ್ರವಾರದ ಲಕ್ಷ್ಮಿಗೆ || ೩॥ 


ನಿಗಮ ವೇದ್ಯಳೆ ನಿನ್ನ ಗುಣಗಳ |

ಬಗೆ ಬಗೆಯಿಂದಲಿ ಸ್ತುತಿಸುವೆ |

ತೆಗೆದು ಭಾಗ್ಯವ ನೀಡು ಜಗದೊಡೆಯ |

ಭೀಮೇಷ ಕೃಷ್ಣನ ಮಡದಿಯೆ || ೪ ||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು