|| ಗುರು ಸ್ತುತಿ ||
kannadabhajanlyrics.blogspot.com |
ಮಹಾರಾಜ್ ನಿನ್ನನು | ಬೇಡುತಿಹೆ ನಾನು |
ಮಹನೀಯ ಎನ್ನನು | ಕೈ ಬಿಡ ಬೇಡೆಂದು |
ಕೃಪೆ ಮಾಡಬೇಕೆಂದು ॥ ೧.
ನಾಮದ ಮಣಿಯ ಬೆಳಕಿನಿಂದ|ದಾರಿಯನ್ನೇ ತೋರಿದೆ |
ನಾಮ ಸ್ಮರಣೆ ಮಾತ್ರದಿಂದ | ಭಕ್ಷರ್ನೆಲ್ಲಾ ಕಾಯ್ದೆ |
ಕಷ್ಟವೆಲ್ಲ ನೀಗಿದೆ || ೨.
ಜೀಜಾ ಬಾಯಿಯ ಕೈಯಿಂದ ನೀ|ಕೆಂಡವನ್ನೇ ನುಂಗಿದೆ |
ಮಾಝೆ ಸದ್ಗುರು ರಾವೋ ಎಂದು|ಪಾಡಿಸಿ ಕೊಂಡೆ |
ಪೊಗಳಿಸಿ ಕೊಂಡೆ ॥ ೩.
ಜೆಂತಾಮಣಿಯ ಮಂದಿರದಲ್ಲಿ|ಸದಾ ವಾಸಿಪೆನೆಂದೆ |
ಚಿಂತೆಯೆಲ್ಲವನ್ನು ಹರಿಸಿ | ನಾಮ ಸ್ಮರಣೆ ಮಾಡೆಂದೆ |
ರಾಮ ಸ್ಮರಣೆ ಮಾಡೆಂದೆ || ೪.
ಸ್ವಾಮಿ ಬ್ರಹ್ಮ ಚೈತನ್ಯ | ಪ್ರೇಮದಿಂದ ನೋಡೆನ್ನ|
ಸ್ವಾಮಿ ದಾಸ ಬೇಡುವೆ | ಭಕ್ತಿಯನ್ನು ನೀಡೆಂದು |
ಮುಕ್ತಿಯನ್ನು ನೀಡೆಂದು ॥
0 ಕಾಮೆಂಟ್ಗಳು