|| ಶ್ರೀ ಎಂ ಸ್ವಾಮೀಜಿ ಸ್ತುತಿ ||
ಶ್ರೀ ಬಿಂದುಮಾಧವ ಶರ್ಮ ವಿರಚಿತ
28 ಏಪ್ರಿಲ್ 2019
ಬೆಲಗೂರು
kannadabhajanlyrics.blogspot.com |
ರತ್ನ ಬಂದಿದೆ ನೋಡಿರೋ - ಶ್ರೀ ಎಮ್
ಎಂಬ ರತ್ನ ಬಂದಿದೆ ನೋಡಿರೋ ॥
ವೇದ ಶಾಸ್ತ್ರ ಪುರಾಣವರುಹುತ
ದೇಶವೆಲ್ಲವ ಸುತ್ತಿ ತಾನು
ತನ್ನ ತಾನು ತಿಳಿಯಿರೆಂದು
ಮತ್ತೆ ಮತ್ತೆ ಅರುಹಿದಂಥ || ರತ್ನ ||
ದೇಶ ದೇಶಗಳೆಲ್ಲ ಸುತ್ತಿ
ಭಾರತಾಂಬೆಯ ಬಿಡದೆ ಸ್ತುತಿಸಿ
ವೀರತತ್ವವ ಪೊಗಳುತಲಿ ತಾ
ಧೀರನಾಗಿ ನಿಂತ ನಿಜ ಶ್ರೀ ॥ ರತ್ನ ||
ಕಾಲುನಡಿಗೆಲಿ-ನಡೆಯುತಾ-
ಇವ ತನ್ನ ಭಕ್ತರ ಮುದದಿ ಪೊರೆಯುತ
ನಿತ್ಯರಾಮ ಧ್ಯಾನ ಮಾಡುತ
ಸತ್ಯ ಧರ್ಮವ ಬಿಡದ - ಶ್ರೀ ॥ ರತ್ನ ||
ಜಾತಿ ಭೇದವ ಎಣಿಸದೆ ತಾ
ದೇಶಸೇವೆಯ ನಿತ್ಯ ಮಾಡಿ
ವೇದ ಧರ್ಮವ ಸಾರಿ ತಿಳಿಸುತ
ಧ್ಯಾನ ಮಾರ್ಗವ ಬಿಡದೆ ಹಿಡಿದ ॥ ರತ್ನ ||
ಮಂದ ಮತಿಯರ ತಿದ್ದಿ ತಾನು
ಎಂದಿನಂತೆ ನಿಂತನಿವನು
ಸಂತತಂ ಸತ್ಕರ್ಮ ನಿಷ್ಠನು
ಜ್ಞಾನಮಾರ್ಗವ ತೋರಿದಂಥ ॥ ರತ್ನ ||
ಭಾರತಾಂಬೆಯ ಉದ್ದ ಅಗಲಕು
ಹೆಜ್ಜೆ ಮೇಲೆ ಹೆಜ್ಜೆ ಹಾಕುತ
ಜನರಿಗಾನಂದ ತೋರುತ
ತನ್ನ ತಾನು ಎಂದೋ ಮರೆತ ॥ ರತ್ನ ||
ಅತ್ತ ಇತ್ತ ಸುತ್ತಿ ಈತನು
ನ್ಯಾಯ ಪತಿಯ ಜೊತೆಯಲಂದು
ಬೆಲಗೂರು ಹನುಮ ವಿಲಾಸವರಿತು
ಹನುಮ ವಿಳಾಸಕೆ ಬರುತಲಿರುವ || ರತ್ನ ||
ಅಂದು ಹನುಮನ ಕಂಡ ತಾನು
ತನ್ನ ಅಗ್ರಜನೀತನೆನುತ
ತೆರೆದ ಹೃದಯದಿ ಬಾಚಿ ತಬ್ಬುತ
ಜನ್ಮ ಸಾರ್ಥಕವಾಯಿತೆಂದ ॥ ರತ್ನ ||
0 ಕಾಮೆಂಟ್ಗಳು