|| ಓಂ ಜಯ ಗುರು ಶಂಕರ ಭಗವನ್ ||
kannadabhajanlyrics.blogspot.com |
ಶ್ರೀಗುರು ವಚನ ಸುಧಾರಸವನು ಸವಿ |
ದಾಗಾಳಾಹುದು ನರರಿಗೆ ಮಕುತಿ।
ಭೋಗಾ ಭೋಗಾಭಿಯೋಗವ ನೀಗಿ ಶಿವ |
ಜೀವ ಯೋಗಾನು ರಾಗ ತತ್ಪರಚಿತ್ತನಾಗೀ ॥ಪಲ್ಲವಿ॥
ತೊರೆದು ವಿಷಯವನಿ | ರ್ವಿಷಯಾಂಕುರವಸು।
ಸ್ಥಿರಮತಿ ಎಂಬ ಸುಕ್ಷೇತ್ರಾದೊಳು।
ಕರಿಗೊಂಡು ನೆಲಸಿ ಸಜ್ಜನ ಸಂಘವೆಂಬ ಪು |
ಷ್ಕರವೆರದಭಿವೃದ್ಧಿಗೊಳಿಸೆಂದು ಪೇಳುವ || ೧ ||
ನಿರಹಂತೆ ಎಂಬ ಪಾತಿಯ ಕಟ್ಟಿ ಮರವೆಯಂ |
ಬುರುಕಂಟಕವನೆಲ್ಲ | ನೆರೆಶೋಧಿಸಿ |
ಅರಿವರ್ಗವೆಂಬ ಭಾದಕ ಕೀಟಕವ ಕೊಂದು |
ಗುರುಭಕ್ತಿಯಂಬಭಿವೃತ್ತಿಗಟ್ಟಿ ಪೊರೆ ಎಂಬ || ೨ ||
ಭೇದಾವಾದಗಳೆಂಬ ಚೋರಾರ ನಿಜ ತತ್ವ |
ಬೋದೆಯೆಂಬುರು ಖಡ್ಗದೊಳು ತರಿದೂ॥
ಸಾಧಿಸಿ ಮುಕ್ತಿ ಎಂಬುವ ಫಲವನು ಸವಿದಾನಾದಿ
ಶ್ರೀಗುರುಶಂಕರನ ಕೂಡೆಂದುಸುರುವ ಶ್ರೀಗುರು ||೩||
0 ಕಾಮೆಂಟ್ಗಳು