|| ಗೋವಿಂದ ಸ್ತುತಿ ||
ಮುದ್ದು ತಾರೋ ರಂಗ ಎದ್ದು ಬಾರೋ ||ಪ||
ಅಂದವಾದ ಕರ್ಪೂರದ
ಕರಡಿಕೇಯ ಬಾಯೊಳೊಮ್ಮೆ ||ಅಪ||
ವಿಷವನುಣಿಸಲು ಬಂದ
ಅಸುರೆ ಪೂತನಿಯ ಕೊಂದ |
ವಶವನಲ್ಲ ಮಗನೆ ನಿನ್ನ
ವಿಷವನುಂಡ ಬಾಯೊಳೊಮ್ಮೆ ||೧||
ಕಡೆದ ಸಮಯದಿ ಬಂದು
ಕಡೆವ ಸತಿಯ ಕರವ ಪಿಡಿದು |
ಕಡೆದ ಬೆಣ್ಣೆ ಮೊಸರನ್ನೆಲ್ಲಾ ಒಡನೆ
ಮೆದ್ದ ಬಾಯೊಳೊಮ್ಮೆ ||೨||
ತೊರವೆಯ ನಾರಸಿಂಹ ವರದ
ಶ್ರೀ ಪುರಂದರ ವಿಠಲ
ಹರವಿಹಾಲನ್ನೆಲ್ಲ ಕುಡಿದ ನೊರೆ
ಹಾಲಿನ ಬಾಯೊಳೊಮ್ಮ ||೩||
1
0 ಕಾಮೆಂಟ್ಗಳು