|| ರಾಮ ಸ್ತುತಿ ||
ರಾಮಗಿಂತಧಿಕ ದೈವಗಳುಂಟೆ ಜಗದಿ
ಭಾಮಕವನು ಬಿಡಿರೋ ||ಪ||
ತಾ ಮರೆಯದೆ ಭಕ್ತಸ್ರೇಮಕೆ ಪ್ರೇಮದಿ
ಕಾಮಿತ ನೀಡುವ ಕರುಣಾಳು ಎನಿಸಿದ ||ಅ.ಪ.||
ಅಂದಾಂಜನೇಯನು ಬಂದು ಚರಣಕ್ಕೆರೆಗೆ
ಪ್ರೇಮ ಭರಿತಳಾತನಿಗೆ
ಸಂದೇಹವಿಲ್ಲದೆ ಬ್ರಹ್ಮಪದವಿಯನಿತ್ತೆ
ಇನ್ಯಾರ ಭಜಿಸಿ ಏನಪಡೆದಿಹರಯ್ಯ ||೧||
ಅರಿಯ ಸೋದರ ಬಂದು ಚರಣಕ್ಕೆರೆಗೆ
ಪ್ರೇಮ ಭರಿತಳಾತನಿಗೆ
ದೊರೆತನ ಕರುಣಿಸಿ ವರವ ನಿನ್ನಿಂದ ಪಡೆದ
ಗುರುತರ ಕರುಣಾಳು ಕುರುಹುಂಟೆ ಲೋಕದಿ ||೨||
0 ಕಾಮೆಂಟ್ಗಳು