||ವೇಂಕಟಾಚಲ ಪಂಚಮಿ ಸ್ತುತಿ||
ರಚನೆ : ಅಂಬಾಸುತ
ಕುಸುಮವೊಂದನು ತಂದು ನಿನ್ನ ಚರಣಕೆ ಇರಿಸೆ
ಬಾಗಿಲಲಿ ಕಾದಿಹೆನು ಎನ್ನ ಸದ್ಗುರುವೇ...||ಪ||
ಬಾಗಿಹೆನು ಮನದಿಂದ ತನುವಿಂದ ನೋಡೆನ್ನ
ಕರುಣಿಸಿ ದರುಶನವ ನೀಡು ತಂದೆ....||ಅ.ಪ||
ನಿತ್ಯ ಕಾಯಕವಿದುವೆ ಸತ್ಯ ಮೂರುತಿ ನಿನ್ನ
ಚಿತ್ತಕಾಹ್ವಾನಿಸುವ ಪರಿಯು ನೋಡೈ.... ||೧||
ಪರಿಕಿಸುವೆಯಾ ಕುಸುಮ ಪಕ್ವವೇ ಎಂದೂ
ನಿನ್ನ ದಾಸರ ಪಾದ ಧೂಳಲಿದು ಅರಳಿಹುದು...||೨||
ತಡವಾಗಲೆನ್ನ ಪೂರ್ವದ ಕರ್ಮ ಕಾರಣವೇ?
ಕಳೆಯುವವ ನೀ ತಾನೇ ಕನಿಕರಿಸದೇಕೇ? ||೩||
ಆತ್ಮಸಖನೇ ವರ ಸುಖಪುರದ ಒಡೆಯನೇ
ಅಂಬಾಸುತನ ಮೊರೆಯನ್ನಾಲಿಸೊ ನೀ ಬೇಗನೇ..||೪||
#
0 ಕಾಮೆಂಟ್ಗಳು