|| ವೇಂಕಟಾಚಲ_ಪಂಚಮಿ ||
ರಚನೆ : ಅಂಬಾಸುತ
ಫಲವನ್ನೀಯೋ ಗುರುನಾಥನೇ
ಪರಮಾತ್ಮನು ನೀನೆಂದು ಕೈಚಾಚಿಹೆನೈ...||ಪ||
ನಿನ್ ಹೊರತು ಮಿಕ್ಕಾರ ಬಳಿ ನಾ ಬೇಡಲೊ
ನಿನ್ ಹೊರತು ಫಲವನ್ನು ಎನಗಾರೀವರೋ...||೧||
ಸೇವೆಗೆ ಪ್ರತಿಫಲ ಕೊಡು ಎಂದು ನಾ ಬೇಡೆನೊ
ಸೇವಿಸುವೆನು ನಿತ್ಯ ಸಾವಾಗೊ ತನಕವೂ....||೨||
ಮಾಗಿದ ಕೊಳೆಯದ ಮುದದಿ ರಸಪೂರಿತ
ಮಂಗಳಕರನ ಕರ ಸೋಕಿದ ಸ್ವಾಧಿಷ್ಟ...||೩||
ಸುಖಪುರದೊಡೆಯ ಗುರುನಾಥ ಅವಧೂತ...
ಅಂಬಾಸುತನಿಗೆ ನಿನ್ನ ಕರುಣೆಯೆಂಬುವ ಪೂರ್ಣ...||೪||
#
0 ಕಾಮೆಂಟ್ಗಳು