|| ಕೃಷ್ಣ ಭಜನೆ ||
ಮಧುಕರ ವೃತ್ತಿ ಎನ್ನದು
ಮಧುಕರ ವೃತ್ತಿ ಎನ್ನದು ಬಲು ಚೆನ್ನದು||2||
ಪದುಮನಾಭನ ಪಾದ||3||
ಪದುಮ ಮಧುಪವೆಂಬ
ಕಾಲಿಗೆ ಗೆಜ್ಜೆ ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟಿ,
ನೀಲವರ್ಣನ ಗುಣ||2||
ಆಲಾಪಿಸುತ ಬಲು ಓಲಗ ಮಾಡುವಂತ||2||
ರಂಗನಾಥನ ಗುಣ
ರಂಗನಾಥನ ಗುಣ, ಇಂಗದೆ ಪಾಡುತ್ತ||2||
ಶ್ರಂಗಾರ ನೋಡುತ, ಕಂಗಳ ಆನಂದವೆಂಬ||2||
ಇಂದಿರಾಪತಿ ,ಪುರಂದರ ವಿಠ್ಠಲನಲ್ಲಿ||2||
ಇಂದಿರಾಪತಿ, ಪುರಂದರವಿಠ್ಠಲನಲಿ
ಚೆಂದದ ಭಕ್ತಿಯಿಂದ ಆನಂದ ಪಡುವಂತ||2||
0 ಕಾಮೆಂಟ್ಗಳು