ಗುರು ಕರುಣವನು ಪಡೆದು - Guru Karunavan Padedu

|| ಹರಿ ಸ್ತುತಿ ||




ಉರಗಾದ್ರಿ ವಾಸ ವಿಠ್ಠಲ ನೀನಿವನ 

ಪರಮಾದರದಿ ಕಾಪಾಡೋ ಹರಿಯೇ ।


ಗುರು ಕರುಣವನು ಪಡೆದು

ಹರಿ ವಾಯು ಗುರುಗಳ 

ಸೇವೆಯನೆಯಿತ್ತು ಕಾಪಾಡೋ ಹರಿಯೇ ।। 


ಗುರು ಕರುಣವೇ ಪಡೆಯದ ಸುರನರಾದ್ಯರಿಗೆ

ಹರಿ ಕರುಣ ದೊರೆಯದೆಂಬುದು ಸಿದ್ಧ 

ನಿರುತ ದೃಢ ಮನವ ನೀನಿತ್ತು ಕಾಪಾಡೋ ಹರಿಯೇ||


ಹರಿ ನಿನ್ನ ದಾಸರಾದಾಸ್ಯವನುಇತ್ತು 

ಸತತ ಕಾಪಾಡೋ ಹರಿಯೇ ।

ಪರಮ ಭಾಗವತರ ಸಂಗವನುಯಿತ್ತು 

ಪರಮ ಕೃಪೆಯಿಂದ ರಕ್ಷಿಸೋ ಹರಿಯೇ ।।  


ಪಂಚ ರೂಪಾತ್ಮಕನೆ ಪಂಚ ರೂಪವನರುಹಿ ।

ಸಂಚಿತಾಗಮಿಗಳ ಹರಿಸಿ ।

ಮಿಂಚಿನಂದದಿ ಪೊಳೆಯೋ ಹರಿಯೇ ।

ಗುರು ಶಿಷ್ಯ ಬಿಂಬೈಕ್ಯಚಿಂತನೆಯಿಂದ ।

ಹರಿ ವಾಯು ಮತದಲ್ಲಿ ನಿರುತ ಕಾಪಾಡೋ ಹರಿಯೇ|


ಪರಮ ಭಾಗವತರನ್ನು ಹಿಂದೆ ರಕ್ಷಿಸಿದಂತೆ ನೀನಿವನ 

ನಿರುತ ಕಾಪಾಡೋ ಹರಿಯೇ।ಪರಮ ಭಾಗವತರ ತಂದೆ 

ಮುದ್ದುಮೋಹನ ವಿಠ್ಠಲ ಇನ್ನಿವನಲಿ

ಒಂದಂಶದಲ್ಲಿಇದ್ದು ಹೃದಯಾಂಬರದಿ । 

ನಿನ್ನ ಬಿಂಬ ರೂಪವ ತೋರಿ ಕಾಪಾಡೋ ಹರಿಯೇ ।।




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು