ಸಂಕ್ಷಿಪ್ತ ಶ್ರೀ ಗುರು ಚರಿತ್ರೆ ಹಾಡು - Sankshiptha Sri Guru Charitre Hadu

|| ಸಂಕ್ಷಿಪ್ತ ಶ್ರೀ ಗುರು ಚರಿತ್ರೆ ||





ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು

ಬಂದನಾ ಶ್ರೀ ದತ್ತ |

ಪರಿಪರಿತಾಪವ ಕೇಶವ ಕಳೆಯುತ

ನಿಜಸುಖವಿತ್ತನು ಶ್ರೀ ದತ್ತ||


ಕಷ್ಟದಿಂದ ಕಂಗೆಡುವ ಬಾಲಕನ ಕಂಡ

ಸಿದ್ಧಮುನಿ ಶ್ರೀ ದತ್ತ |

ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು

ಕಾಯುವನು ಶ್ರೀ ದತ್ತ ||


ನಿಂತು ನುಡಿವ ಯೋಗೀಂದ್ರ ನಂಘ್ರಯನು

ಪಿಡಿದು ಕೇಳಿದ ಶ್ರೀ ದತ್ತ 

ಇಂತು ಕರುಣೆಯದು ಕೊನೆಗೆ ಬಂದಿತೇ

ಪಾಲಿಸು ಪಾಲಿಸು ಶ್ರೀ ದತ್ತ ||


ಆಲಿಸು ಕುವರನೆ ಶ್ರೀ ಗುರುಚರಿತೆಯ

ಭವತಾರಕನ ಶ್ರೀ ದತ್ತ |

ಕೇಳುವ ಎಲ್ಲರ ಹಸಿವನು ಹಿಂಗಿಸಿ ಹರುಷದಿ

ಕಾಯುವ ಶ್ರೀ ದತ್ತ ||


ಇವನೇ ದತ್ತನು ಅನಸೂಯಾತ್ಮಜ

ವಿಶ್ವನಿಯಾಮಕ ಶ್ರೀ ದತ್ತ |

ಭವತಿಯ ನೆವದಲಿ ವಿಪ್ರನ ಮಡದಿಗೆ

ಸುತನಾದನು ಶ್ರೀ ದತ್ತ ||


ಶ್ರೀ ಪಾದ ಶ್ರೀವಲ್ಲಭ ನಾಮದಿ

ಕುಲ ಉದ್ಧರಿಸಿದ ಶ್ರೀ ದತ್ತ |

ಕಾಪಿಡೆ ನಡೆದನು ಭಾರತ ಜನವನು

ಯಾತ್ರೆಯ ನೆವದಿಂ ಶ್ರೀ ದತ್ತ ||


ತೀರ್ಥಕ್ಷೇ ತ್ರಗಳ ಸುತ್ತಿ ಪತಿತರನು

ಪಾವನಗೊಳಿಸಿದ ಶ್ರೀ ದತ್ತ |

ಸಾರ್ಥವಾದ ಗೋಕರ್ಣನ ನೋಡುತ

ಕುರುವದಿ ನಿಂತನು ಶ್ರೀ ದತ್ತ ||


ಮಂದಮತಿ ಅಂಬಾ ಕುಮಾರನಿಗೆ

ಜ್ಞಾನದಾತನು ಶ್ರೀ ದತ್ತ |

ಮಂದವಾಸರದ ಪ್ರದೋಷ ಪೂಜೆಯ

ಮಹಿಮೆಯ ಹೇಳಿದ ಶ್ರೀ ದತ್ತ ||


ಅಗಸಗೆ ಮುಂದಣ ಜನುಮದಿ

ರಾಜ್ಯದ ಭೋಗವನಿತ್ತನು ಶ್ರೀ ದತ್ತ |

ಅಗಲದಂತಿರಲು ವಲ್ಲಭೇಶನ

ಸಂಕಟಕಳೆದನು ಶ್ರೀ ದತ್ತ ||


ವಚನದಂತೆ ಅಂಬಾ-ಮಾಧವರಿಗೆ

ಬಾಲಕನಾದನು ಶ್ರೀ ದತ್ತ |

ಉಚಿತಸಮಯ ಬರೆ ನಾಲ್ಕೂ ವೇದದ

ಸಾರವ ಹೇಳಿದ ಶ್ರೀ ದತ್ತ ||


ಅವಳೀ ತನಯರ ತಾಯಿಗೆ ಕರುಣಿಸಿ

ಕಾಶಿಗೆ ಬಂದನು ಶ್ರೀ ದತ್ತ |

ನವ ಸಂವತ್ಸರವಿರೆ ಸನ್ಯಾಸವ

ಸ್ವೀಕರಿಸಿದನು ಶ್ರೀ ದತ್ತ |


ಮೂವತ್ತ ಬುಧವ ದಾಟಿ ಬಂದು

ತಾಯ್ತಂದೆಯ ನೋಡಿದ ಶ್ರೀ ದತ್ತ |

ಆವುದನೆಲ್ಲವ ನೀಡಿ ಹರಸುತ

ಪಯಣವ ಬೆಳೆಸಿದ ಶ್ರೀ ದತ್ತ ||


ಉದರಶೂಲೆಯ ವಿಪ್ರನ ಜನ್ಮವನ್ನುಳಿಸಿ

ಕಾಯ್ದನು ಶ್ರೀ ದತ್ತ |

ಮುದದಿ ಪೂಜಿಸುವ ಸತಿ ಪತಿಯರನು

ಕಂಡು ನಲಿದನು ಶ್ರೀ ದತ್ತ ||


ಸಾಯನ ದೇವನ ಸಾವನು ತಪ್ಪಿಸಿ

ಯವನ ನಂಜಿಸಿದ ಶ್ರೀ ದತ್ತ |

ಧ್ಯೇಯ ಸಾಧನೆಗೆ ಯಾತ್ರೆಯ ಮಾಡಲು

ಶಿಷ್ಯನ ಕಳುಹಿದ ಶ್ರೀ ದತ್ತ ||


ಗುಪ್ತವಾಗಿರಲು ಗುರು ನಿಂದಕನಿಗೆ

ಬೋಧನೆ ಮಾಡಿದ ಶ್ರೀ ದತ್ತ |

ಸುಪ್ತಚೇತನೆಯ ಚಾಲಿಪ ಶಕ್ತಿಯು

ಗುರುವಿಗಿದೆಂದನು ಶ್ರೀ ದತ್ತ ||


ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ

ಮತಿಯ ಪಾಲಿಸಿದ ಶ್ರೀ ದತ್ತ |

ಭಾವದಿ ಭಿಕ್ಷೆಯನೀಡಿದ ವಿಪ್ರಗೆ

ಸಂಚಿತ ತೋರಿದ ಶ್ರೀ ದತ್ತ ||


ಯೋಗಿನಿಯರ ಸಹವಾಸದಿ ಇರುವನು

ನರಸಿಂಹ ಸರಸ್ವತಿ ಶ್ರೀ ದತ್ತ |

ಸಾಗಿ ಶೋಧಿಸಿದ ಅಂಬಿಗರವನಿಗೆ

ಗುಪಿತವ ಹೇಳಿದ ಶ್ರೀ ದತ್ತ ||


ಹರಕೆಯ ಕುವರನ ಹರಣವ ಬರೆಸಿದ

ಔದುಂಬರದಿ ಶ್ರೀ ದತ್ತ |

ಬರುತ ಅಮರಜಾ ಭೀಮಾಸಂಗಮ

ಕ್ಷೇತ್ರದಿ ತಂಗಿದ ಶ್ರೀ ದತ್ತ ||


ಬರಡೆಮ್ಮೆಯನು ಕರೆಯಿಸಿ ಜನರಿಗೆ

ಕೌತುಕ ತೋರಿದ ಶ್ರೀ ದತ್ತ |

ಹರುಷದಿ ಕರೆಯಲು ಗಾಣ್ಗಾಪುರದಲಿ

ನೆಲಸಬಂದನಾ ಶ್ರೀ ದತ್ತ ||


ದೂರಮಾಡಿದ ಬ್ರಹ್ಮರಾಕ್ಷಸನ

ಕುಮಸಿಗೆ ನೆರೆದನು ಶ್ರೀ ದತ್ತ |

ತೋರಿದ ತ್ರಿವಿಕ್ರಮಾರತಿಗೆ

ವಿಶ್ವ ರೂಪಾವನು ಶ್ರೀ ದತ್ತ ||


ವಾದಿಸಬಂದಿಹ ಸೊಕ್ಕಿದ ವಿಪ್ರನ

ಗರ್ವ ಕಳೆದನು ಶ್ರೀ ದತ್ತ |

ವೇದದ ಸಾರ ನಿರೂಪಣ ಮಾಡುತ

ಅದ್ಭುತ ಹೇಳಿದ ಶ್ರೀ ದತ್ತ ||


ತಿಳಿಯದ ವಿಪ್ರರು ವಾದವ ಬೆಳೆಸಲು

ಹೊಲೆಯನ ಕರೆದನು ಶ್ರೀ ದತ್ತ |

ಬಳಿದು ಭಸ್ಮವ ಕೃಪೆಯನು ಮಾಡುತ

ವಾದಿಸ ಹೇಳಿದ ಶ್ರೀ ದತ್ತ ||


ಪಾಪಿಗಳಾಗಲೇ ಅಂಜಿ ನಡುಗಿದರು

ಶಾಪವ ಕೊಟ್ಟನು ಶ್ರೀ ದತ್ತ |

ಪಾಪ ಪುಣ್ಯದ ಸಂಚಿತ ಕರ್ಮದ

ಫಲವನುಸುರಿದ ಶ್ರೀ ದತ್ತ ||


ಭಸ್ಮ ಮಹಾತ್ಮೆಯ ತಿಳಿ ಹೇಳಿದನು

ವಾಮ ದೇವನು ಶ್ರೀ ದತ್ತ |

ವಿಸ್ಮಯಗೊಂಡಿಹ ರಾಕ್ಷಸ ಜನೆಮಕೆ

ಮೋಕ್ಷವನಿತ್ತನು ಶ್ರೀ ದತ್ತ ||


ಸತಿಸಾವಿತ್ರಿಯ ಪತಿ ಮೃತನಾಗಲು

ಅಳುವುದು ಕಂಡನು ಶ್ರೀ ದತ್ತ |

ಸತಿಧರ್ಮದ ಇತಿಹಾಸವ ಹೇಳುತ

ಸತಿ ಹೋಗೆಂದನು ಶ್ರೀ ದತ್ತ ||


ಹೋಗುವ ಮುನ್ನ ಕ್ಷೇತ್ರಕೆ ಬಂದ

ಬಾಲೆಯ ಹರಸಿದ ಶ್ರೀ ದತ್ತ |

ಹೋಗದು ಜೀವ ಎನ್ನಯ ನುಡಿಯಿದು

ಮಂಗಳವೆಂದನು ಶ್ರೀ ದತ್ತ ||


ಚೇತರಿಸಿತು ಶವ ಅಭಿಷಿತ ಜಲದಿಂ

ಪ್ರೋಕ್ಷಣೆ ಮಾಡಲು ಶ್ರೀ ದತ್ತ |

ಆತುರದಿಂ ದಂಪತಿಗಳು ಬಾಗಲು

ಆಶೀರ್ವದಿಸಿದ ಶ್ರೀ ದತ್ತ ||


ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ

ಹೇಳಿದನವರಿಗೆ ಶ್ರೀ ದತ್ತ |

ಭದ್ರೆ ಸೀಮಂತಿನಿ ಮಾಡಿದ ಚಂದಿರ

ವಾರದ ವ್ರತವನ್ನು ಶ್ರೀ ದತ್ತ || 


ಬೆಳಗಿನಿಂದಲಿ ರಾತ್ರಿಯವರೆಗಿನ

ವಿಹಿತಕರ್ಮವನು ಶ್ರೀ ವತ್ತ |

ತಿಳಿಪಡಿಸಿದ ವಿಪ್ರನ ಮಡದಿಗೆ

ಪರಾನ್ನದೋಷವ ಶ್ರೀ ದತ್ತ ||


ಮೂವರ ಭೋಜನ ಆಕ್ಷಯವಾಗಿಸಿ

ದಾಸಗೊಲಿದನು ಶ್ರೀ ದತ್ತ |

ಸಾವ ಸಮೀಪದ ಗಂಗಾ ಮಾತೆಗೆ

ಮಕ್ಕಳ ಕೊಟ್ಟನು ಶ್ರೀ ದತ್ತ ||


ಒಣಮರ ಚಿಗುರಿಸಿ ನರಹರಿ

ವಿಪ್ರನ ಕುಷ್ಠವ ಕಳೆದನು ಶ್ರೀ ದತ್ತ |

ಅಣುರದಿ ಅಂಜಿಕೆ ತೋರುತ ಶಿಷ್ಕನ

ಪರೀಕ್ಷೆ ಮಾಡಿದ ಶ್ರೀ ದತ್ತ ||


ಕಾಶೀಕ್ಷೇತ್ರದ ಮಹಿಮೆಯ ತೋರಿದ

ಸಾಯನ ದೇವಗೆ ಶ್ರೀ ದತ್ತ |

ತೋಷದಲವನು ಹಾಡುತಲೆಂದನು

ಹರಿಹರಬ್ರಹನ್ಮು ಶ್ರೀ ದತ್ತ || 


ಅನಂತನಾವ್ರತ ಮಹಿಮೆಯ ಹೇಳುತ

ವ್ರತವ ಮಾಡಿಸಿದನು ಶ್ರೀ ದತ್ತ |

ಅನಂತ ಕೋಟಿಯು ಅನಂತ ರೂಪನು

ಅನಂತ ಮಹಿಮನು ಶ್ರೀ ದತ್ತ || 


ನೇಕಾರಗೆ ಶ್ರೀ ಶೈಲದ ಯಾತ್ರೆಯ

ಮಾಡಿಸಿದನು ತಾ ಶ್ರೀ ದತ್ತ |

ಸಾಕಾರದಿ ಶಿವರಾತ್ರಿ ಮಹಾತ್ಮೆಯ

ಹೇಳಿದನಾತಗೆ ಶ್ರೀ ದತ್ತ ||


ದೇವಿಯ ಭಕ್ತನ ಕುಷ್ಠ ನಿವಾರಿಸಿ

ಜ್ಞಾನವಕೊಟ್ಟನು ಶ್ರೀ ದತ್ತ

ಕವಿಯಾದಾ ಕಲ್ಕೇಶನರ್ಚಕನ

ಶಿಷ್ಕನ ಮಾಡಿದ ಶ್ರೀ ದತ್ತ || 


ಹಸುಳೆಯರೆಲ್ಲರನು ಮೆಚ್ಚಿಸಿ ಧರಿಸಿದ

ಎಂಟು ರೂಪವನು ಶ್ರೀ ದತ್ತ |

ಕೃಷಿಕನ ಮೌನಾರ್ಚನೆಗೊಲಿದಿತ್ತನು

ನೂರ್ಮಡಿ ಧಾನ್ಯವ ಶ್ರೀ ದತ್ತ ||


ಪುರಜನರಿಂ ಸಹ ಸಕಲ ತೀರ್ಥಗಳ

ಯಾತ್ರೆಯ ಮಾಡಿದ ಶ್ರೀ ದತ್ತ |

ಪೂರ್ವಾಶ್ರಮದ ಭಗಿನಿಯ ಪಾಪ

ಕ್ಷಾಲನೆ ಮಾಡಿದ ಶ್ರೀ ದತ್ತ ||


ಹರುಷದಿ-ಹೇಳಿದ ಗುರುಗೀತೆಯನು

ನಾಮಧಾರಕಗೆ ಶ್ರೀ ದತ್ತ |

ನೆರೆ ನಂಬುವರನು ಪರಿಪಾಲಿಸುವುದು

ನಿಶ್ಚಿತವೆಂದನು ಶ್ರೀ ದತ್ತ || 


ಯಾಕೋ ರಜಕ ಎನ್ನುತ ಯವನರ

ರಾಜನ ಕರೆದನು ಶ್ರೀ ದತ್ತ |

ಕಾಕುಗೊಂಡಿಹ ರಾಜನ ಮಂಡಿಯ

ರೋಗವ ಕಳೆದನು ಶ್ರೀ ದತ್ತ || 


ಯವನರ ಕಾಟಕೆ ಕದಳೀವನಕೆ

ಹೋಗುವೆನೆಂದನು ಶ್ರೀ ದತ್ತ |

ಅವಸರದಿಂ ಬಲು ಶೋಕಿಸಬೇಡಿರಿ

ಇಲ್ಲಿಹೆನೆಂದನು ಶ್ರೀ ದತ್ತ ||


ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ

ಎಂದನು ಶ್ರೀ ದತ್ತ |

ಬೇಡಿದ ಕೊಡುವೆನು ಭಾವುಕ ಜನರಿಗೆ

ಸತ್ಯವು ಎಂದನು ಶ್ರೀ ದತ್ತ ||


ಅತಿ ಸಂಕ್ಷೇಪದ ಈ ಗುರುಚರಿತ್ರೆಯ

ದಿನವೂ ಹಾಡುವ ಕೇಳ್ವರಿಗೆ |

ಅತಿ ಆನಂದವು ಮೇಣ್‌ ಸುಖಸಂಪದ

ಪಾಲಿಸುವನು ತಾ ಶ್ರೀ ದತ್ತ ||


ಮಂದಮತಿ ನಾ ತೊದಲ್ನುಡಿಯಿಂದ

ಹಾಡಿದೆನಿದನು ಶ್ರೀ ದತ್ತ |

ವಂದಿಸುತಲಿ ನಾ ಅರ್ಪಣ ಮಾಡುವೆ

ನಿನ್ನಡಿಗಳಿಗೆ ಶ್ರೀ ದತ್ತ || 


ಮಂಗಳ ಮಂಗಳ ನಿತ್ಕ ಸುಮಂಗಳ

ಮಂಗಳಮಯನು ಶ್ರೀ ದತ್ತ |

ಗಂಗೆಮಾಳಾಂಬಿಕೆ ಕಾಂತಸ್ವರೂಪನು

ಸಚ್ಚಿದಾನಂದಮಯ ಶ್ರೀ ದತ್ತ ||


ಸಿದ್ದಾಂತ ಅವಧೂತ ಚಿಂತ ಶ್ರೀ ಗುರುದೇವದತ್ತ

ಶ್ರೀ ಕೃಷ್ಣಾರ್ಪ್ಮಣಮಸ್ತು 












ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು