ನೆನೆಯ ಬಾರದೆ ಮನವೆ - Neneya Barade Manave

|| ಸೂರ್ಯನಾರಾಯಣ ಸ್ತುತಿ ||

 ರಚನೆ : ಕನಕದಾಸರು 

ರಾಗ : ವಾಸಂತಿ
 ತಾಳ : ಖಂಡ ಛಾಪು 



ನೆನೆಯ ಬಾರದೆ ಮನವೆ ಪರಮ ಪಾವನನ||ಪ||


ಸಾಕಾರದಿಂದ ಸರ್ವವನು

ರಕ್ಷಿಪನಜೋಕೆಯಲಿ ತನ್ನ

ನೆನೆವವರ ಪಾಲಿಪನ - ಅ-ನೇಕ ಮೂರುತಿ

ಸೂರ್ಯನಾರಾಯಣನ ||೧||


ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನ ಒಮ್ಮೆ

ನೆನೆಯಲು ಪ್ರಸನ್ನನಾದವನ ಧರ್ಮಕ್ಕೆ

ಸಾಕ್ಷಾತ್ ರೂಪಾಗಿ ತೋರುವನ

ನಿರ್ಮಲಾತ್ಮಕವಾಗಿ ಥಳಥಳಿಸುವವನ 2


ಹರಗೆ ನಯನವಾಗಿ ಮಕುಟವ ಬೆಳಗುವನ

ತರುಣಿಯೈವರ ಲಜ್ಜೆ ಕಾಯ್ದವನ

ದುರಿತಕೋಟಿಗಳನುದ್ಧರಿಸುವವನ

ಪರಬ್ರಹ್ಮ ಕಾಗಿನೆಲೆಯಾದಿಕೇಶವನ

ಮರೆಯದೆ ಭಜಿಪರ ಕಾಯುವವನ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು