ಆರುತಿ ಬೆಳಗಿರೆ ಕೇಶವಮೂರ್ತಿಗೆ - Aruthi Belagire Keshava Murthige

 || ಕೇಶವಾದಿ ನಾರಾಯಣಗೆ ಆರುತಿ ||





ಆರುತಿ ಬೆಳಗಿರೆ ಕೇಶವಮೂರ್ತಿಗೆ 

ಪಾರಾಯಣ ಮಾಡಿನಾರಾಯಣಗೆ

ಕೀರುತಿ ಪೊಗಳುತ ಮಾಧವಗೆ 

ಆನಂದದಿ ಮಾಡೆಗೋವಿಂದಗೆ||ಆರುತಿ||


ಕಷ್ಟಗಳ ಕಳೆಯೆಂದು ವಿಷ್ಣುವಿಗೆ 

ಮೋದದಿಂದಮಧುಸೂದನಗೆ

ಚಕ್ರಧರನು ತ್ರಿವಿಕ್ರಮಗೆ

ಪಾವನ ಮೂರುತಿ ವಾಮನನಿಗೆ||ಆರುತಿ||


ಆದರದಲಿ ಮಾಡೆ ಶ್ರೀಧರಗೆ

ದೋಷ ಕಳೆವ ಹೃಷಿಕೇಶನಿಗೆ

ಹೃತ್ಪದ್ಮದಲ್ಲಿರುವಪದ್ಮನಾಭನಿಗೆ

ಆಮೋದದಿ ಮಾಡೆದಾಮೋದರಗೆ||ಆರುತಿ||


ಶಂಕರರಿಂದೊಂದಿತಸಂಕರುಷಣಗೆ

ಲೇಸುಮಾಡುವವಾಸುದೇವನಿಗೆ

ವಿದ್ಯಾ ಬುದ್ಧಿ ನೀಡೊ ಪ್ರದ್ಯುಮ್ನನಿಗೆ

 ಧೇನುಪಾಲಕ ಅನಿರುದ್ಧನಿಗೆ||ಆರುತಿ|||


ಹರುಷದಿಂದಪುರುಷೋತ್ತಮಗೆ

ಪಾದಕೆ ಒಂದಿಸಿ ಅಧೋಕ್ಷಜಗೆ

ಪಾರುಗಾಣಿಪ ನಾರಸಿಂಹಗೆ

ಚ್ಯುತಿಯಿಲ್ಲದೆನಮ್ಮಅಚ್ಯುತಗೆ||ಆರುತಿ||


ಧನದಾಸೆಯಿಲ್ಲದೆಜನಾರ್ಧನಗೆ

ಸಂಪ್ರೀತಿಯಿಂದಉಪೇಂದ್ರನಿಗೆ

ಲೀಲೆಯಿಂದಲಿ ಶ್ರೀಹರಿಗೆ

ಉದ್ಧರಿಪ ಕೃಷ್ಣಮಧ್ವೇಶಕೃಷ್ಣಗೆ||ಆರುತಿ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು