|| ಶ್ರೀಕೃಷ್ಣ ಸ್ತುತಿ ||
ಇನ್ನೇನು ಬೇಡೆನು ಇಷ್ಟೇ ಬೇಡುವೆ
ನಾ ನಿನಗೆ ಕರವ ಮುಗಿದು ।।
ಅಷ್ಟು ಸೌಭಾಗ್ಯ ಕೊಟ್ಟು ನೀ ಎನ್ನ
ಕಷ್ಟ ಬಿಡಿಸೆಂದು ಬೇಡೆನೋ ಕೃಷ್ಣರಾಯ ||
ಸೃಷ್ಟಿಗೊಡೆಯ ನಿನ್ನಿಷ್ಟವಿದ್ದಂತಾಗಲಿ
ಶಿಷ್ಟ ಜನರ ಸಂಗ ಕೊಟ್ಟು ರಕ್ಷಿಸು ಎಂದು||
ಜ್ಞಾನಿಗಳರಸ ಜಾಣ ಪ್ರಾಣನಾಥವಿಠಲರಾಯ
ಸಾನುರಾಗದಿ ನಿನ್ನ ಧ್ಯಾನ ಕೊಟ್ಟು
ಬಹು ಮಾನಿಯೆಂದೆನಿಸೆಂದು ||
0 ಕಾಮೆಂಟ್ಗಳು