ಸ್ವಾಮಿ ನಿನ್ನ ಪಾದವೇ ಕೈಲಾಸವು - Swami Ninna Padave Kailasavu

|| ಅಯ್ಯಪ್ಪನ ಭಜನೆ ||




ಸ್ವಾಮಿ ನಿನ್ನ ಪಾದವೇ ಕೈಲಾಸವು||

ನೀನು ನಿಂತ ತಾನವೇ ವೈಕುಂಠವು|| 

ಶಬರಿಮಲೆ ಕ್ಷೇತ್ರವೇ ಭೂ ಸ್ವರ್ಗವು|| 

ಸ್ವಾಮಿ ನಿನ್ನ ಪಾದವೇ ಕೈಲಾಸವು || 

ನೀನು ನಿಂತ ತಾನವೇ ವೈಕುಂಠವು|| 


ಗಂಗೆಯಲ್ಲಿ ಮಿಂದರು ಪಾಪ ಕಳೆಯಲಿಲ್ಲ ॥ 

ತೀರ್ಥಯಾತ್ರೆಗೆದರು ಮುಕ್ತಿ ದೊರೆಯಲಿಲ್ಲ ॥ 

ಹೋಮ ಪೂಜೆಯಲ್ಲೂ ಶಾಂತಿ ಕಾಣಲಿಲ್ಲ ॥ 

ಅಯ್ಯ ನಿನ್ನ ಸನಿಹದಲ್ಲಿ ಕಂಡೆ ನಾನು ಎಲ್ಲ ||೧|| 


ಏಳೇಳು ಜನ್ಮದಲ್ಲೂ ನನ್ನವನು ನೀನು || 

ನಿನ್ನ ಪಾದ ಧೂಳು ಎಂದೆಂದೂ ನಾನು || 

ನನ್ನ ದೇವ ನೀನು ನಿನ್ನದಾಸ ನಾನು || 

ನಿನ್ನ ರೂಪ ಕಂಡೆನು ನನ್ನ ನಾನೇ ಮರೆತೆನು||೨||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು