|| ಗೋವಿಂದ ಸ್ತುತಿ ||
ನಾರಾಯಣ ನಾರಾಯಣ ಗೋವಿಂದ
ಹರಿ ನಾರಾಯಣ ಗೋವಿಂದ || ಪ. ||
ನಾರಾಯಣ ಗೋವಿಂದ ಗೋವಿಂದ ಮುಕುಂದ
ಪರತರ ಪರಮಾನಂದ || ಅ. ಪ.||
ಮೊದಲು ಮತ್ಸ್ಯನಾಗಿ ಉದಿಸಿ ಸೋಮನ
ಸದೆದು ವೇದಗಳ ತಂದ ||
ಮಂದರಧರ ತಾ ಸಿಂಧುವಿನೊಳಮೃತ
ತಂದು ಭಕ್ತರಿಗೆ ಉಣಲೆಂದ
ನಾರಾಯಣ ನಾರಾಯಣ ಗೋವಿಂದ ಮತ್ಸ್ಯ
ನಾರಾಯಣ ನಾರಾಯಣ ಗೋವಿಂದ
ನಾರಾಯಣ ನಾರಾಯಣ ಗೋವಿಂದ ಕೂರ್ಮ
ನಾರಾಯಣ ನಾರಾಯಣ ಗೋವಿಂದ || ೧ ||
ಭೂಮಿಯ ಕದ್ದ ಖಳನನು ಮರ್ದಿಸಿ
ಆ ಮಹಾ ಸತಿಯಳ ತಂದ ||
ದುರುಳ ಹಿರಣ್ಯನ ಕರುಳ ಬಗೆದು
ತನ್ನ ಕೊರಳೊಳಿಟ್ಟ ಬಗೆಯಿಂದ
ನಾರಾಯಣ ನಾರಾಯಣ ಗೋವಿಂದ ವರಹ
ನಾರಾಯಣ ನಾರಾಯಣ ಗೋವಿಂದ
ನಾರಾಯಣ ನಾರಾಯಣ ಗೋವಿಂದ ನರಹರಿ
ನಾರಾಯಣ ನಾರಾಯಣ ಗೋವಿಂದ || ೨ ||
ಪುಟ್ಟನಾಗಿ ಮಹಿ ಕೊಟ್ಟ ಬಲಿಯ ತಲೆ
ಮೆಟ್ಟಿ ತುಳಿದ ಬಗೆಯಿಂದ ||
ಧಾತ್ರಿಯೊಳು ಮುನಿಪುತ್ರನಾಗಿ ಬಂದು
ಕ್ಷತ್ರಿಯರೆಲ್ಲರ ಕೊಂದ
ನಾರಾಯಣ ನಾರಾಯಣ ಗೋವಿಂದ ವಾಮನ
ನಾರಾಯಣ ನಾರಾಯಣ ಗೋವಿಂದ
ನಾರಾಯಣ ನಾರಾಯಣ ಗೋವಿಂದ ಭಾರ್ಗವ
ನಾರಾಯಣ ನಾರಾಯಣ ಗೋವಿಂದ|| ೩ ||
ಮಡದಿಗಾಗಿ ಸರಗಡಲನೆ ಕಟ್ಟಿ
ಹಿಡಿದು ರಾವಣನ ಕೊಂದ ||
ಗೋಕುಲದಿ ಹುಟ್ಟಿ ಗೋವ್ಗಳ ಕಾಯ್ದ
ಗೋಪಾಲಕೃಷ್ಣ ತಾ ಬಂದ
ನಾರಾಯಣ ನಾರಾಯಣ ಗೋವಿಂದ ರಾಮ
ನಾರಾಯಣ ನಾರಾಯಣ ಗೋವಿಂದ
ನಾರಾಯಣ ನಾರಾಯಣ ಗೋವಿಂದ ಕೃಷ್ಣ
ನಾರಾಯಣ ನಾರಾಯಣ ಗೋವಿಂದ|| ೪ ||
ಛಲದಲಿ ತ್ರಿಪುರರ ಸತಿಯರ ವ್ರತದ
ಫಲವನಳಿದ ಬಗೆಯಿಂದ ||
ಧರೆಯೊಳು ಪರಮ ನೀಚರ ಸವರೆ
ಕುದುರೆಯೇರಿದ ಕಲಿ ಚಂದ
ನಾರಾಯಣ ನಾರಾಯಣ ಗೋವಿಂದ ಬುದ್ಧ
ನಾರಾಯಣ ನಾರಾಯಣ ಗೋವಿಂದ
ನಾರಾಯಣ ನಾರಾಯಣ ಗೋವಿಂದ ಕಲ್ಕಿ
ನಾರಾಯಣ ನಾರಾಯಣ ಗೋವಿಂದ|| ೬ ||
ದೋಷದೂರ ಶ್ರೀಪುರಂದರವಿಠಲ
ಪೋಷಕ ಭಕ್ತ ಸುವೃಂದ
ನಾರಾಯಣ ನಾರಾಯಣ ಗೋವಿಂದ ಶ್ರೀಮನ್
ನಾರಾಯಣ ನಾರಾಯಣ ಗೋವಿಂದ ಭಜಮನ್
ನಾರಾಯಣ ನಾರಾಯಣ ಗೋವಿಂದ || ೭ ||

0 ಕಾಮೆಂಟ್ಗಳು