|| ರಾಘವೇಂದ್ರ ಸ್ವಾಮಿ ಸ್ತುತಿ ||
ತುಂಗಾ ತೀರದಿ ಮಂತ್ರಾಲಯದೊಳು
ನೆಲೆಸಿಹ ಯತಿಗಳ ನೋಡೋಣ||ಪ||
ಮಂಗಳ ಗುಣಗಣ ಸದ್ಗುರುರಾಯರ
ದರುಶನ ನಿರತವು ಮಾಡೋಣ||ಅ.ಪ||
ಮುನ್ನ ಪ್ರಹ್ಲಾದನೆನಿಸುತ ನೃಸಿಂಹನ
ಕರೆಸಿದ ಮುನಿಗಳ ನಮಿಸೋಣ|
ಮನ್ನಿಸಿ ತಪ್ಪನು ಪಾಪವನಳಿಸುವ
ಯೋಗಿಯ ಪಾದವ ಹಿಡಿಯೋಣ||೧||
ಮೇದಿನೀಪತಿ ಶ್ರೀ ರಾಮನ ಅನುದಿನ
ಪೂಜಿಪ ರಾಯರ ನೆನೆಯೋಣ|
ಆದರದಿಂದಲಿ ವಿಠಲನ ಭಜಿಸಿದ
ಮಾಧವ ಪ್ರಿಯನ ಸ್ಮರಿಸೋಣ||೨||
ಪರಿಮಳ ಗ್ರಂಥವ ವಿರಚಿಸಿ ಹರುಷದಿ
ಬೋಧಿಸಿದವರನು ಜಪಿಸೋಣ|
ತ್ವರಿತದಿ ಕರುಣ ಕಟಾಕ್ಷವ ಬೀರುವ
ಯತಿಯಲಿ ವರಗಳ ಬೇಡೋಣ||೩||
ದುರಿತಗಳೆಲ್ಲವ ನಾಶವ ಮಾಡುವ
ಗುರು ರಾಘವರನು ಭಜಿಸೋಣ|
ಧರೆಯೊಳು ಶರಣರ ಪೊರೆಯುವ
ರಾಯರ ಪೂಜೆಯ ದಿನವೂ ಗೈಯೋಣ||೪||

0 ಕಾಮೆಂಟ್ಗಳು