ಹರಿ ನಾರಾಯಣ ಎನು ಮನವೆ - Belaguru Bhajan - Hari Narayana Enu Manave

|| ಹರಿ ಸ್ತುತಿ ||






ಹರಿ ನಾರಾಯಣ ಹರಿ ನಾರಾಯಣ

ಹರಿ ನಾರಾಯಣ ಎನು ಮನವೆ ||ಪ ||

ನಾರಾಯಣನೆಂಬ ನಾಮದ ಬೀಜವ

ನಾರದ ಬಿತ್ತಿದ ಧರೆಯೊಳಗೆ ||ಅ.ಪ ||



ತರಳ ಧೃವನಿಂದ ಅಂಕುರಿಸಿತು ಅದು

ವರ ಪ್ರಹ್ಲಾದನಿಂದ ಮೊಳಕೆ ಆಯ್ತು

ಧರಣೀಶ ರುಕುಮಾಂಗದನಿಂದ ಚಿಗುರಿತು

ಕುರುಪಿತಾಮಹನಿಂದ ಹೂವಾಯ್ತು ||೧||



ವಿಜಯನ ಸತಿಯಿಂದ ಕಾಯಾಯ್ತು ಅದು

ಗಜೇಂದ್ರನಿಂದ ದೊರೆಹಣ್ಣಾಯ್ತು

ಶ್ರೀ ಶುಕಮುನಿಯಿಂದ ಪರಿಪಕ್ವವಾಯಿತು

ಅಜಮಿಳ ತಾನುಂಡು ರಸಸವಿದ ||೨||



ಕಾಮಿತ ಫಲವೀವ ನಾಮವೊಂದಿರಲಾಗಿ

ಹೋಮ ನೇಮ ಜಪ ತಪವೇಕೆ

ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ

ನೇಮದಿಂದಲಿ ನೀ ನೆನೆ ಮನವೆ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು