ಧರ್ಮವೇ ಜಯವೆಂಬ ದಿವ್ಯಮಂತ್ರ - Dharmave Jayavemba Divyamanthra

|| ದೇವರಾನಾಮ ||

ರಚನೆ : ಪುರಂದರದಾಸರು




ಧರ್ಮವೇ ಜಯವೆಂಬ ದಿವ್ಯಮಂತ್ರ||ಪ||

ಮರ್ಮವನರಿತು ಮಾಡಲಿಬೇಕು ತಂತ್ರ||ಅ.ಪ||


ವಿಷವಿಕ್ಕಿದವನಿಗೆ ಷಡುರಸವನುಣಿಸಲಿಬೇಕು

ದ್ವೇಷ ಮಾಡಿದವನ ಪೋಷಿಸಲಿಬೇಕು

ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿಬೇಕು

ಮೋಸ ಮಾಡುವನ ಹೇಸರು ಮಗನಿಗಿಡಬೇಕು||೧||


ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು

ಬಂಧನದೊಳಿಟ್ಟವರ ಬೆರೆಯಬೇಕು

ಕೊಂದ ವೈರಿಯ ಮನೆಗೆ ನಡೆದು ಹೋಗಲಿಬೇಕು

ಕುಂದೆಣಿಸುವವರ ಗೆಳೆತನ ಮಾಡಬೇಕು||೨||


ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು

ಕಂಡು ಸಹಿಸದವರ ಕರೆಯಬೇಕು

ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ

ಕೊಂಡಾಡಿ ತಾ ಧನ್ಯನಾಗಬೇಕು||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು