|| ಪಾಂಡುರಂಗ ಭಜನೆ ||
ಇದುವೇ ಪಂಡರಾಪುರ ವಿಠಲ
ಇದ ನಾ ಅರಿಯದೆ ಪೋದೆ ಮುಕ್ತಿಯ ಧಾಮ||ಪ||
ಪಾಪ ತೊಳೆವ ಪಾವನ ಚಂದ್ರಭಾಗ
ತಾಪವ ಹರಿಸಿ ಶಾಂತಿಯನೀವ
ಈ ವರ ಕ್ಷೇತ್ರ ಭೂವೈಕುಂಠ
ಭವ ಭಯ ಪರಿಹಾರ ವಿಠಲ ||೧||
ಪುಣ್ಯದ ದಿವಸವು ಏಕಾದಶಿ ಯಂದು
ಹಾಡುತ ನಲಿಯುತ ಭಕುತರು ಬಂದು
ನೋಡುವ ಭಾಗ್ಯ ಎನಗೆ ಇಂದು
ಕರುಣಿಸಿ ಮುದಗೈದೆ ವಿಠಲ || ೨||
ಶಾಂತಲ ಜಾಣೆಯು ಚೋಕಮೇಲನು
ಶ್ರೀ ತುಕಾರಾಮನು ಜ್ಞಾನೇಶ್ವರನು
ಪುಂಡಲೀಕನು ನಾಮದೇವನು
ಮೋಕ್ಷವನೇ ಪಡೆದ ವಿಠಲ ||೩||
0 ಕಾಮೆಂಟ್ಗಳು